ಅಂಬಿ ನಿಂಗೆ ವಯಸ್ಸಾಯ್ತೊ ಚಿತ್ರದ ಮುಖ್ಯ ಪಾತ್ರದಲ್ಲಿ ಖುಷ್ಬೂ ಅಥವಾ ರಮ್ಯಕೃಷ್ಣ

ಅಂಬಿ ನಿಂಗೆ ವಯಸ್ಸಾಯ್ತೊ ಚಿತ್ರದ ಮೂಲಕ ಅಂಬರೀಷ್ ಮತ್ತೆ ಮುಖ್ಯ ನಟನೆಗೆ ಮರಳಿದ್ದಾರೆ. ಚಿತ್ರದ ...
ಅಂಬಿ ನಿಂಗೆ ವಯಸ್ಸಾಯ್ತೊ ಸೆಟ್ ನಲ್ಲಿ ಅಂಬರೀಷ್ ಮತ್ತು ನಿರ್ದೇಶಕ ಗುರುನಾಥ್ ಗಾಣಿಗ
ಅಂಬಿ ನಿಂಗೆ ವಯಸ್ಸಾಯ್ತೊ ಸೆಟ್ ನಲ್ಲಿ ಅಂಬರೀಷ್ ಮತ್ತು ನಿರ್ದೇಶಕ ಗುರುನಾಥ್ ಗಾಣಿಗ

ಅಂಬಿ ನಿಂಗೆ ವಯಸ್ಸಾಯ್ತೊ ಚಿತ್ರದ ಮೂಲಕ ಅಂಬರೀಷ್ ಮತ್ತೆ ಮುಖ್ಯ ನಟನೆಗೆ ಮರಳಿದ್ದಾರೆ. ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಗುರುನಾಥ ಗಾಣಿಗ ಎಂಬ ಚೊಚ್ಚಲ ನಿರ್ದೇಶಕ ಇದರ ನಿರ್ದೇಶನ ಮಾಡುತ್ತಿದ್ದು ಪ್ರೇಕ್ಷಕರಲ್ಲಿ ಕೂಡ ಕುತೂಹಲ ಮೂಡಿಸಿದೆ.

ಇದರಲ್ಲಿ ಅಂಬರೀಷ್ ವಿಶೇಷ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ದಿನಾಂಕಗಳ ಹೊಂದಾಣಿಕೆ ಮಾಡಿಕೊಳ್ಳಲಾಗದೆ ಸುಹಾಸಿನಿ ಚಿತ್ರದಿಂದ ಹೊರಬರುವ ಸಾಧ್ಯತೆಯಿದೆ ಎನ್ನುತ್ತಿವೆ ಚಿತ್ರತಂಡದ ಮೂಲಗಳು.

ಪ್ರಸ್ತುತ ಪೋರ್ಚುಗಲ್ ನಲ್ಲಿರುವ ಸುಹಾಸಿನಿಗೆ ಮುಂದಿನ ಚಿತ್ರೀಕರಣ ದಿನಾಂಕಗಳಲ್ಲಿ ಬಂದು ಸೇರಿಕೊಳ್ಳುವುದು ಕಷ್ಟವಾಗಬಹುದಂತೆ. ಹೀಗಾಗಿ ಚಿತ್ರ ನಿರ್ಮಾಪಕರು ಖುಷ್ಬೂ ಮತ್ತು ರಮ್ಯಕೃಷ್ಣ ಅವರನ್ನು ಸಂಪರ್ಕಿಸಿವೆ ಎಂದು ಹೇಳಲಾಗುತ್ತಿದೆ.

ಅವರ ಲಭ್ಯತೆ ಮತ್ತು ಬೇರೆ ಬದ್ಧತೆಗಳನ್ನು ನೋಡಿಕೊಂಡು ಇಬ್ಬರಲ್ಲಿ ಒಬ್ಬರು ಪಾತ್ರಕ್ಕೆ ಆಯ್ಕೆಯಾಗುವ ಸಾಧ್ಯತೆಯಿದೆ. ಮುಖ್ಯ ಪಾತ್ರ ವಹಿಸುತ್ತಿರುವವರು ಯಾರು ಎಂದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


ಕಿಚ್ಚ ಕ್ರಿಯೇಷನ್ಸ್ ನಡಿ ಚಿತ್ರ ತಯಾರಾಗುತ್ತಿದ್ದು ಇದಕ್ಕೆ ಜಾಕ್ ಮಂಜು ಕೂಡ ಬಂಡವಾಳ ಹೂಡಿದ್ದಾರೆ. ಸುದೀಪ್ ಮತ್ತು ಶೃತಿ ಹರಿಹರನ್ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಂಬಿ ನಿಂಗೆ ವಯಸ್ಸಾಯ್ತು ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com