ತೆರೆಗೆ ಬರಲಿದೆ 'ಅಮೃತವರ್ಷಿಣಿ' ಭಾಗ 2, ಇಲ್ಲೂ ಇರುತ್ತಾರೆ ರಮೇಶ್ ಅರವಿಂದ್

1997ರಲ್ಲಿ ತೆರೆಕಂಡ ಚಿತ್ರ ಅಮೃತವರ್ಷಿಣಿ ಹಿಟ್ ಆಗಿತ್ತು. ಈಗಲೂ ಸಿನಿಪ್ರಿಯರು ಆ ಚಿತ್ರವನ್ನು...
ರಮೇಶ್ ಅರವಿಂದ್
ರಮೇಶ್ ಅರವಿಂದ್
Updated on

1997ರಲ್ಲಿ ತೆರೆಕಂಡ ಚಿತ್ರ ಅಮೃತವರ್ಷಿಣಿ ಹಿಟ್ ಆಗಿತ್ತು. ಈಗಲೂ ಸಿನಿಪ್ರಿಯರು ಆ ಚಿತ್ರವನ್ನು ನೆನೆಸಿಕೊಳ್ಳುತ್ತಾರೆ. ಇದೀಗ ಅದರ ಮುಂದುವರಿದ ಭಾಗ ತೆರೆಗೆ ಬರಲಿದೆ. ಈ ಸುದ್ದಿ ಕೇಳಿದರೆ ಕನ್ನಡ ಚಿತ್ರ ಪ್ರೇಮಿಗಳಿಗೆ ಖುಷಿಯಾಗುವುದು ಖಂಡಿತ.

ಅಮೃತವರ್ಷಿಣಿ ಮೊದಲ ಭಾಗದಲ್ಲಿ ರಮೇಶ್ ಅರವಿಂದ್, ಸುಹಾಸಿನಿ, ಶರತ್ ಬಾಬು ಮತ್ತು ನಿವೇದಿತಾ ಜೈನ್ ನಟಿಸಿದ್ದರು. ಇದೀಗ 2ನೇ ಭಾಗದ ಚಿತ್ರದ ಕಥೆ ಬರೆಯುವ ಕೆಲಸ ನಡೆಯುತ್ತಿದ್ದು ಈ ಚಿತ್ರದಲ್ಲಿ ಕೂಡ ರಮೇಶ್ ಅರವಿಂದ್ ಇರಲಿದ್ದಾರೆ ಅನ್ನುವುದು ಸಂತಸದ ವಿಚಾರ.

ಅಮೃತ ವರ್ಷಿಣಿ ಚಿತ್ರವನ್ನು ದಿನೇಶ್ ಬಾಬು ನಿರ್ದೇಶಿಸಿದ್ದರು. ಈ ಚಿತ್ರವನ್ನು ಕೂಡ ಅವರೇ ನಿರ್ದೇಶಿಸಲಿದ್ದಾರೆ. ಜಯಶ್ರೀ ದೇವಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅವರು ಹಿಂದೆ ಮುಕುಂದ ಮುರಾರಿ ಚಿತ್ರ ನಿರ್ಮಾಣ ಮಾಡಿದ್ದರು. ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸ ಸದ್ಯದಲ್ಲಿಯೇ ಆರಂಭವಾಗಲಿದೆ. ಮೊದಲ ಭಾಗದಂತೆ 2ನೇ ಭಾಗದಲ್ಲಿ ಕೂಡ ರಮೇಶ್ ಅರವಿಂದ್ ಮುಖ್ಯ ಪಾತ್ರ ವಹಿಸಲಿದ್ದಾರೆ. ಚಿತ್ರತಂಡ ಇನ್ನೂ ರಮೇಶ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿಲ್ಲ.

ಚಿತ್ರದಲ್ಲಿ ಕೆಲವು ಯುವ ಕಲಾವಿದರು ಕೆಲಸ ಮಾಡಲಿದ್ದಾರೆ. ಹಿಂದಿನ ಅಮೃತವರ್ಷಿಣಿ ಸಿನಿಮಾದಲ್ಲಿ ರಮೇಶ್ ಅಭಿಷೇಕ್ ಪಾತ್ರ ಮಾಡಿದ್ದರು. ಅಭಿಷೇಕ್ ಗೆ ವೀಣಾ(ಸುಹಾಸಿನಿ) ಮೇಲೆ ವ್ಯಾಮೋಹ ಉಂಟಾಗಿ ಅದು ಎಷ್ಟರ ಮಟ್ಟಿಗೆ ಹೋಗಿತ್ತೆಂದರೆ ಆಕೆಯ ಪತಿ ಹೇಮಂತ್ ನನ್ನು ಕೊಲ್ಲುವವರೆಗೆ. ಚಿತ್ರದಲ್ಲಿನ ತುಂತುರು, ಈ ಸುಂದರ, ಮನಸೆ ಬದುಕು, ಎಲ್ಲಾ ಶಿಲ್ಪಗಳಿಗೂ ಇಂದು ಕೂಡ ಜನರ ಬಾಯಲ್ಲಿ ಗುನುಗುತ್ತಿರುತ್ತದೆ.

ಜನರ ಮನಸ್ಸಿನಲ್ಲಿ ಪ್ರಶಂಸೆ ಗಳಿಸಿದ್ದ ಅಮೃತವರ್ಷಿಣಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ತೆಲುಗು ಮತ್ತು ತಮಿಳು ಭಾಷೆಗಳಿಗೆ ಡಬ್ ಆಗಿತ್ತು. ಮಲಯಾಳಂನಲ್ಲಿ ರಿಮೇಕ್ ಮಾಡಲಾಗಿತ್ತು. ಇದೀಗ ಅಮೃತವರ್ಷಿಣಿ ಭಾಗ 2 ಹೇಗೆ ಮೂಡಿಬರಲಿದೆ ಎಂಬ ಕುತೂಹಲವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com