ಸಸ್ಪೆನ್ಸ್ ಥ್ರಿಲ್ಲರ್ 'ಉದ್ಘರ್ಷ'ಕ್ಕೆ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನ!

ಕನ್ನಡ ಸಸ್ಪೆನ್ಸ್ ಚಿತ್ರಗಳ ನಿರ್ಮಾಣದಲ್ಲಿ ಹೆಸರಾದ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಸೃಷ್ಟಿಯಾಗಿರುವ "ಉದ್ಘರ್ಷ" ಬಿಡುಗಡೆಗೆ ಮುನ್ನವೇ ಸಾಕಷ್ಟು ಕುತೂಹಲ ಮೂಡಿಸಿದೆ.
ಹರ್ಷಿಕಾ ಪೂಣಚ್ಚ
ಹರ್ಷಿಕಾ ಪೂಣಚ್ಚ
ಬೆಂಗಳೂರು: ಕನ್ನಡ ಸಸ್ಪೆನ್ಸ್ ಚಿತ್ರಗಳ ನಿರ್ಮಾಣದಲ್ಲಿ ಹೆಸರಾದ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಸೃಷ್ಟಿಯಾಗಿರುವ "ಉದ್ಘರ್ಷ" ಬಿಡುಗಡೆಗೆ ಮುನ್ನವೇ ಸಾಕಷ್ಟು ಕುತೂಹಲ ಮೂಡಿಸಿದೆ.
"ತರ್ಕ", "ನಿಷ್ಕರ್ಷ", "ಉತ್ಕರ್ಷ" ಸೇರಿ ಹಲು ಚಿತ್ರಗಳನ್ನು ತಯಾರಿಸಿರುವ ದೇಸಾಯಿ ಈ ಚಿತ್ರವನ್ನು ಸಹ ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ತಯಾರಿಸುತ್ತಿದ್ದಾರೆ. ಚಿತ್ರವು ತಮಿಳು ಹಾಗೂ ಮಲಯಾಳಂ ಗೆ ಡಬ್ ಆಗುತ್ತದೆಂದು ಅವರು ಹೇಳಿದರು.
ಒಂದು ಆಕ್ಷನ್-ಥ್ರಿಲ್ಲರ್ ಕಥೆಯನ್ನು ಹೊಂದಿರುವ "ಉದ್ಘ್ಹರ್ಷ"ದಲ್ಲಿ ಸಿಂಗಂ - 3  ಖ್ಯಾತಿಯ ಠಾಕೂರ್ ಅನೂಪ್ ಸಿಂಗ್, ಕಬಾಲಿಯ ಧನ್ಸಿಕಾ, ಬಾಹುಬಲಿ ಚಿತ್ರದ ಪ್ರಭಾಕರ್ ಇದ್ದ್ದಾರೆ.
ತನ್ಯಾ ಹೋಪ್, ಶ್ರದ್ದಾ ದಾಸ್, ಕಿಶೋರ್, ವಂಶಿ ಕೃಷ್ಣ, ಸೇರಿ ಅನೇಕ ನಟರು ಅಭಿನಯಿಸಿದ ಈ ಚಿತ್ರದಲ್ಲಿ ಹರ್ಷಿಕಾ ಪೂಣಚ್ಚ ಸಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಡಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚುತ್ರಕ್ಕೆ ಬಾಲಿವುಡ್ ಸಂಗೀರ ನಿರ್ದೇಶಕ ಸಂಜಯ್ ಚೌಧರಿ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಚಿತ್ರಕ್ಕೆ ಕೆಂಪರಾಜು ಸಂಕಲನ, ರವಿವರ್ಮ ಸಾಹಸ ನಿರ್ದೇಶನವಿದೆ.ವಿಷ್ಣುವರ್ಧನ್ ಹಾಗು ಪಿ. ರಾಜನ್ ಛಾಯಾಗ್ರಹಣವಿರುವ ಈ ಚಿತ್ರ ಹೈದರಾಬಾದ್, ಮಡಿಕೇರಿ, ಕೇರಳ ಹಾಗೂ ಬೆಂಗಳೂರುಗಳಲ್ಲಿ ಚಿತ್ರೀಕರಣಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com