ದಮಯಂತಿ ಸಿನಿಮಾ ಒಪ್ಪಿಕೊಳ್ಳಲು ಕಾರಣ ಬಿಚ್ಚಿಟ್ಟ ರಾಧಿಕಾ ಕುಮಾರಸ್ವಾಮಿ!

ದಮಯಂತಿ ಶೀರ್ಷಿಕೆಯೇ ನನಗೆ ಈ ಪ್ರಾಜೆಕ್ಟ್ ಗೆ ಸಹಿ ಮಾಡುವಂತೆ ಆಕರ್ಷಿಸಿತು. 1980 ರ ದಶಕದ ರೀತಿಯ ಕಥೆ ಇದಾಗಿದ್ದು, ಹಾಸ್ಯಭರಿತ ಭಯಾನಕ ...
ರಾಧಿಕಾ ಕುಮಾರ ಸ್ವಾಮಿ
ರಾಧಿಕಾ ಕುಮಾರ ಸ್ವಾಮಿ
Updated on
ಬೆಂಗಳೂರು: ದಮಯಂತಿ ಶೀರ್ಷಿಕೆಯೇ ನನಗೆ ಈ ಪ್ರಾಜೆಕ್ಟ್ ಗೆ ಸಹಿ ಮಾಡುವಂತೆ ಆಕರ್ಷಿಸಿತು. 1980 ರ ದಶಕದ ರೀತಿಯ ಕಥೆ ಇದಾಗಿದ್ದು, ಹಾಸ್ಯಭರಿತ  ಭಯಾನಕ ಸಿನಿಮಾವಾಗಿದೆ. ದಮಯಂತಿ ಹೆಸರಿಗೆ ಆಕರ್ಷಿತವಾಗಿ ನಾನು ಸಹಿ ಹಾಕಿದ್ದೇನೆ , ಈ ಪಾತ್ರಕ್ಕೆ ನಾನು ಸೂಕ್ತ ಎಂದು ನನಗನ್ನಿಸುತ್ತದೆ ಎಂದು ಹೇಳಿದ್ದಾರೆ.
ತಮಿಳು ನಟ ವಿಶಾಲ್ ತಂದೆ ಈ ಸಿನಿಮಾದಲ್ಲಿ ರಾಧಿಕಾ ತಂದೆಯಾಗಿ ಪಾತ್ರ ಮಾಡುತ್ತಿದ್ದು, ಅವರಿಗಾಗಿ ನಾನು ಈ ಪಾತ್ರ ಮಾಡಲು ಒಪ್ಪಿಕೊಂಡೆ ಎಂದು ರಾಧಿಕಾ ತಿಳಿಸಿದ್ದಾರೆ, ಜಿಕೆ ರೆಡ್ಡಿ ಅವರಿಗಾಗಿ ನಾನು ಈ ಪಾತ್ರಕ್ಕೆ ಸಹಿ ಮಾಡಿದೆ ಎಂದು ಹೇಳಿದ್ದಾರೆ.
ಇದೊಂದು ನಾಯಕಿ ಪ್ರಧಾನ ಸಿನಿಮಾವಾಗಿದ್ದು, ದಕ್ಷಿಣ ಭಾರತ ಭಾಷೆಗಳಲ್ಲಿ ಕನ್ನಡದಲ್ಲಿ ಮೊದಲ ಬಾರಿಗೆ ನಿರ್ಮಿಸಲಾಗುತ್ತಿದೆ. ಜೊತೆಗೆ ಉತ್ತಮ ಗ್ರಾಫಿಕ್ಸ್ ಕೂಡ ಅಳವಡಿಸಲಾಗುತ್ತಿದೆ, 
ನಾಯಕಿಗಾಗಿ ಹುಡುಕಾಟ ನಡೆಸುತ್ತಿರುವಾಗ  ನಿರ್ದೇಶಕ ಮತ್ತು ನಿರ್ಮಾಪಕ ನವರಸನ್ ರಾಧಿಕಾ ಅವರಿಗೆ ಈ ಪ್ರಾಜೆಕ್ಟ್ ಗೆ ಸೂಚಿಸಿದ್ದಾರೆ. ಸೆಪ್ಟಂಬರ್ ತಿಂಗಳಿಂದ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ, ಸಾಧು ಕೋಕಿಲಾ, ತಬಲ ನಾಣಿ, ಸೇರಿದಂತೆ ಹಲವು ಮಂದಿ  ನಟಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com