ಯುವರತ್ನ ಸಿನಿಮಾ ಮುಹೂರ್ತ
ಸಿನಿಮಾ ಸುದ್ದಿ
ಸರಳವಾಗಿ ನೆರವೇರಿದ 'ಯುವರತ್ನ' ಮುಹೂರ್ತ
ಸಂತೋಷ್ ಆನಂದ್ ರಾಮ್ ನಿರ್ದೇಶನದ ಅಪ್ಪು ನಟನೆಯ ಯುವರತ್ನ ಸಿನಿಮಾ ಮುಹೂರ್ತ ಸರಳವಾಗಿ ನೆರವೇರಿದೆ...
ಬೆಂಗಳೂರು: ಪುನೀತ್ ರಾಜ್ ಕುಮಾರ್ ನಟನೆಯ ನಟಸಾರ್ವಭೌಮ ಸಿನಿಮಾ ಶೂಟಿಂಗ್ ಮುಗಿದಿದ್ದು, ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ, ಸಂತೋಷ್ ಆನಂದ್ ರಾಮ್ ನಿರ್ದೇಶನದ ಅಪ್ಪು ನಟನೆಯ ಯುವರತ್ನ ಸಿನಿಮಾ ಮುಹೂರ್ತ ಸರಳವಾಗಿ ನೆರವೇರಿದೆ.
ಹೊಂಬಾಳೆ ಪ್ರೊಡಕ್ಷನ್ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾಗೆ ಡಿಸೆಂಬರ್ 12 ರಂದು ಮುಹೂರ್ತ ನೆರವೇರಿದೆ.
ಈ ವೇಳೆ ಪುನೀತ್ ರಾಜ್ಕುಮಾರ್ ಮತ್ತು ಡೈರೆಕ್ಟರ್ ಆನಂದ್ ರಾಮ್ ಜೊತೆ ಕೆಲ ಕಲಾವಿದರು ಭಾಗಿಯಾಗಿದ್ದರು.
ಇನ್ನು ಯುವರತ್ನನ ಪ್ರೀ ಪ್ರೊಡಕ್ಷನ್ ಕೆಲಸಗಳು ಈಗಾಗಲೇ ಶುರುವಾಗಿವೆ. ಕಲಾವಿದರ ಹಾಗೂ ತಂತ್ರಜ್ಞರ ಆಯ್ಕೆ ಬಾಕಿಯಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ