ಬೆಂಗಳೂರು: ಕೆರೆಗಳ ಮಾಲಿನ್ಯದ ಕುರಿತಂತೆ ಜನಸಾಮಾನ್ಯರಲ್ಲಿ ಜಾಗೃತಿ ಮುಡಿಸುವ ಸಲುವಾಗಿ ಕಿರಿಕ್ ಪಾರ್ಟಿ ಖ್ಯಾತಿಯ ರಶ್ಮಿಕಾ ಮಂದಣ್ಣ ಬೆಳ್ಳಂದೂರು ಕೆರೆಯೊಳಗೆ ಫೋಟೋಶೂಟ್ ಮಾಡಿಸಿಕೊಂಡಿದ್ದು ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಸಿಲ್ಲಿಕಾನ್ ಸಿಟಿ ಬೆಂಗಳೂರು ಇಲ್ಲಿನ ಕೆರೆಗಳಿಗಾಗಿ ಹೆಸರಾಗಿದ್ದು ಇತ್ತೀಚೆಗೆ ಜನರ ನಿರ್ಲಕ್ಷ ದ ಕಾರಣ ಹಲವು ಕೆರೆಗಳು ಮಲಿನವಾಗಿದೆ.ಪರಿಸರವಾದಿಗಳು ಮತ್ತು ರಾಷ್ಟ್ರೀಯ ಹಸಿರು ಪೀಠ (ಎನ್ಜಿಟಿ) ನಗರದಲ್ಲಿನ 262 ಕೆರೆಗಳ ಸುರಕ್ಶ್ಘತೆಗೆ ಕ್ರಮ ಕೈಗೊಳ್ಳಬೇಕೆಂದುಕರ್ನಾಟಕಕ್ಕೆ ಕರೆ ನೀಡಿದವು. ಅಲ್ಲದೆ ಮಾಲಿನ್ಯ ನಿಯಂತ್ರಿಸುವಲ್ಲಿ ವಿಫಲವಾದ ರಾಜ್ಯ ಸರ್ಕಾರಕ್ಕೆ 50 ಕೋಟಿ ಬಿಬಿಎಂಪಿಗೆ 25 ಕೋಟಿ ರೂಪಾಯಿ ದಂಡ ವಿಧಿಸಿ ಎನ್ಜಿಟಿ ತೀರ್ಪು ಸಹ ನೀಡಿತ್ತು. ಇದೀಗ ಈ ವಿಚಾರ ಸಂಬಂಧ ಜನರ ಮನಸೆಳೆಯಲು ನಟಿ ರಶ್ಮಿಕಾ ತಾವು ಕೆರೆಯೊಳಗೆ ಫೋಟೋಶೂಟ್ ಮಡಿಸಿಕೊಂಡಿದ್ದಾರೆ.