ಯಶ್ ಕೆಜಿಎಫ್ ಚಿತ್ರಕ್ಕೆ ತಡೆಯಾಜ್ಞೆ ಬರಲು ಕಾರಣವಾದ 'ರೌಡಿ ತಂಗಂ' ಯಾರು?

ದೇಶಾದ್ಯಂತ ನಾಳೆ ಭರ್ಜರಿಯಾಗಿ ಬಿಡುಗಡೆಯಾಗಬೇಕಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಬಿಡುಗಡೆಗೆ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಯಶ್
ಯಶ್
Updated on
ಬೆಂಗಳೂರು: ದೇಶಾದ್ಯಂತ ನಾಳೆ ಭರ್ಜರಿಯಾಗಿ ಬಿಡುಗಡೆಯಾಗಬೇಕಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಬಿಡುಗಡೆಗೆ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ್ದು ಇದಕ್ಕೆ ಕೇಳಿ ಬರುತ್ತಿರುವ ಹೆಸರು ಮತ್ತು ಕಾರಣ ಒಂದೇ, ಅದು ರೌಡಿ ತಂಗಂ ಹೆಸರು, ಹಾಗಾದರೆ ಯಾರು ಈ ರೌಡಿ ತಂಗಂ. ಆತನಿಗೂ ಕೆಜಿಎಫ್ ಗೂ ಏನು ಸಂಬಂಧ ಅಂತೀರಾ. 
ಕೋಲಾರ ಮತ್ತು ಕೆಜಿಎಫ್ ನಲ್ಲಿ ಒಂದು ಕಾಲದಲ್ಲಿ ಸದ್ದು ಮಾಡಿದ್ದ ರೌಡಿ ತಂಗಂ. ಈ ಹಿಂದೆ ಲೂಸ್ ಮಾದ ಯೋಗೀಶ್ ಕೋಲಾರ ಸಿನಿಮಾ ಮಾಡಿದ್ದಾಗಲೂ ಈ ತಂಗಂ ಜೀವನಾಧಾರಿತ ಚಿತ್ರ ಎಂಬ ಹೆಸರು ಕೇಳಿ ಬಂದಿತ್ತು. 
ಕೆಜಿಎಫ್ ಚಿತ್ರದ ವಿರುದ್ಧ ದಾವೆ ಹೂಡಿದಿರುವ ವೆಂಕಟೇಶ್ ತಂಗಂ ಬಗ್ಗೆ ಯಾವುದೇ ಸಿನಿಮಾ, ಕಥೆ, ಸಾಕ್ಷ್ಯಚಿತ್ರ ಮಾಡಬೇಕಾದರೆ ತಮ್ಮ ಅನುಮತಿ ಪಡೆಯಬೇಕೆಂದು ತಂಗಂ ಅವರ ತಾಯಿ ಬಳಿಯಿಂದ ಅನುಮತಿ ಪಡೆದುಕೊಂಡಿದ್ದರು. ಕೆಜಿಎಫ್ ಸಹ ತಂಗಂ ಕತೆ ಆಧಾರಿತ ಎಂಬುದು ವೆಂಕಟೇಶ್ ಆರೋಪ. 
ಸದ್ಯ ರೌಡಿ ತಂಗಂ ಬಗ್ಗೆ ಯಾವುದೇ ಚಿತ್ರ ನಿರ್ಮಾಣ ಮಾಡಬೇಕಾದರೂ ವೆಂಕಟೇಶ್ ಬಳಿಯೇ ಅನುಮತಿ ಪಡೆಯಬೇಕಿದೆ. ಈ ಹಿಂದೆ ಕೋಲಾರ್ ಸಿನಿಮಾ ಮಾಡಿದ್ದ ನಿರ್ಮಾಪಕ ಆರ್ ಲಕ್ಷ್ಮಿ ನಾರಾಯಣ್ ಮತ್ತು ಆರ್ ರಮೇಶ್ ಅವರು ವೆಂಕಟೇಶ್ ಅವರಿಂದ ಅನುಮತಿ ಪಡೆದುಕೊಂಡಿದ್ದರು. 
ಕೆಜಿಎಫ್ ಚಿತ್ರದಲ್ಲಿ ರೌಡಿ ತಂಗಂ ಕುರಿತ ದೃಶ್ಯಗಳಿವೆ. ಇದರಲ್ಲಿ ಅವರ ಕಥೆ ಬಳಸಲಾಗಿದೆ. ಹಾಗಾಗಿ, ಅವರು ಕಥೆಯ ಬಗ್ಗೆ ಎಲ್ಲಿಯೂ ಸುಳಿವು ಬಿಟ್ಟುಕೊಟ್ಟಿಲ್ಲ ಎಂಬುದು ವೆಂಕಟೇಶ್ ಆರೋಪ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com