ವಿರಳ ಕಾಯಿಲೆ ಬಗ್ಗೆ ಜಾಗೃತಿಯ ರೇಸ್ 7 ಮ್ಯಾರಾಥಾನ್ ನಲ್ಲಿ ರಾಮಾ ರಾಮಾ ರೇ ಖ್ಯಾತಿಯ ನಟರಾಜ್

ಮಕ್ಕಳಲ್ಲಿ ಕಂಡುಬರುವ ವಿರಳ ಕಾಯಿಲೆಗಳ ಬಗ್ಗೆ ಸರ್ಕಾರಕ್ಕೆ ಹಾಗೂ ಪೋಷಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಂಡಿದ್ದ ರೇಸ್ 7 ಮ್ಯಾರಾಥಾನ್ ನಲ್ಲಿ ರಾಮಾ ರಾಮಾ ರೇ... ಖ್ಯಾತಿಯ ನಟರಾಜ್...
ನಟರಾಜ್
ನಟರಾಜ್
ಮಕ್ಕಳಲ್ಲಿ ಕಂಡುಬರುವ ವಿರಳ ಕಾಯಿಲೆಗಳ ಬಗ್ಗೆ ಸರ್ಕಾರಕ್ಕೆ ಹಾಗೂ ಪೋಷಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಂಡಿದ್ದ ರೇಸ್ 7 ಮ್ಯಾರಾಥಾನ್ ನಲ್ಲಿ ರಾಮಾ ರಾಮಾ ರೇ... ಖ್ಯಾತಿಯ ನಟರಾಜ್ ಭಾಗಿಯಾಗಿದ್ದರು. 
ವಿರಳ ಕಾಯಿಲೆಗಳನ್ನು ಎದುರಿಸುವ ಮಕ್ಕಳಿಗಾಗಿ ಆರ್ಗನೈಸೇಷನ್ ಫಾರ್ ರೇರ್ ಡಿಸೀಸ್ ಇಂಡಿಯಾ(ಒಆರ್ ಡಿಐ) ಸಂಘಟನೆ ಕಳೆದ 2 ವರ್ಷಗಳಿಂದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ವರ್ಷ ಬೆಂಗಳೂರು ಹಾಗೂ ಮುಂಬೈ ನಲ್ಲಿ ಫೆ.25 ರಂದು ಕಬ್ಬನ್ ಪಾರ್ಕ್ ನಿಂದ ಆಯೋಜಿಸಲಾಗಿದ್ದ 7 ಕಿ.ಮೀ ರೇಸ್ 7 ಮ್ಯಾರಥಾನ್ ನಲ್ಲಿ ನಟ ನಟರಾಜ್ ಭಾಗಿಯಾಗಿದ್ದು ವಿಶೇಷವಾಗಿತ್ತು. 
ಬೆಳಕು ಅಂಧ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಣೆ 
ಸಾಮಾನ್ಯವಾಗಿ ಸಿನಿಮಾ ಚಿತ್ರೀಕರಣದಲ್ಲಿ ವ್ಯಸ್ತರಾಗಿರುವ ನಟ ನಟರಾಜ್ ಸಾಮಾಜಿಕ ಕೆಲಸಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದು, ಫೆ.23 ರಂದು ತಮ್ಮ ಜನ್ಮದಿನಾಚರಣೆಯನ್ನು ಬೆಳಕು ಅಕಾಡೆಮಿಯಲ್ಲಿ ಅಂಧ ಮಕ್ಕಳೊಂದಿಗೆ ಆಚರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com