ಸಿನಿಮಾ ಬಗ್ಗೆ ನಟ ಮನೋರಂಜನ್ ಅವರನ್ನು ಮಾತಿಗೆಳೆದಾಗ: ನಾನು ಸಾಹೇಬ ಚಿತ್ರದಲ್ಲಿ ನಟನೆ ಆರಂಭಿಸಿದೆ. ರವಿ ವರ್ವ ಕೊರಿಯೊಗ್ರಫಿ ಮಾಡಿದ್ದ ಸಿನಿಮಾದಲ್ಲಿ ಎರಡು ಫೈಟಿಂಗ್ ಸೀನ್ ಗಳಿದ್ದವು. ಹೊಸಬನಾಗಿ ಈ ಚಿತ್ರದಲ್ಲಿ ಅಭಿನಯಿಸಿದ ನಂತರ ನನಗೆ ಮಾಸ್ ಫಿಲ್ಮ್ ಬಗ್ಗೆ ಪ್ರೇಕ್ಷಕರಲ್ಲಿ ಬೇರೆಯದ್ದೇ ಆದ ಗ್ರಹಿಕೆಯಿದೆ ಎಂದು ಗೊತ್ತಾಯಿತು. ಪ್ರೇಕ್ಷಕರ ಪ್ರಕಾರ ಮಾಸ್ ಫಿಲ್ಮ್ ಎಂದರೆ ಬೊಂಬಾಟ್ ಸಂಭಾಷಣೆಗಳು, ಹೀರೋನ ಪ್ರವೇಶ, ಫೈಟ್ಸ್ ಇತ್ಯಾದಿಗಳಿರುತ್ತವೆ. ನನ್ನ ಎರಡನೇ ಸಿನಿಮಾ ಬೃಹಸ್ಪತಿಯಲ್ಲಿ ಇವೆಲ್ಲವುಗಳು ಇಲ್ಲದಿದ್ದರೂ ಕೂಡ ಕೆಲವೊಂದು ಅಂಶಗಳಿರುವುದರಿಂದ ನನ್ನನ್ನು ಮಾಸ್ ಹೀರೋ ಸ್ಥಾನದಲ್ಲಿ ನಿಲ್ಲಿಸಲಿದೆ. ಮಾಸ್ ಅಂದರೆ ಕಮರ್ಷಿಯಲ್ ಚಿತ್ರಗಳು ಎಂದು ಕೂಡ ಅರ್ಥೈಸಿಕೊಳ್ಳುತ್ತೇನೆ. ಹಾಗೆಂದು ಯಾರನ್ನೊ ಒಬ್ಬರನ್ನು ಹೊಡೆಯುವುದರಲ್ಲಿ ಅರ್ಥವಿಲ್ಲ ಎಂದು ಭಾವಿಸುತ್ತೇನೆ. ಅದಕ್ಕಿಂತಲೂ ಹೆಚ್ಚಾಗಿ ಬೃಹಸ್ಪತಿಯಲ್ಲಿ ಸಮಾಜಕ್ಕೆ ಬೇಕಾದ ಸಂದೇಶವಿದೆ ಎನ್ನುತ್ತಾರೆ.