ಇಲ್ಲಿ ರಿಶಬ್ ಶೆಟ್ಟಿ ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸಲಿದ್ದಾರೆ. ರಿಶಬ್ ಶೆಟ್ಟಿಯವರು ಆರಂಭದಲ್ಲಿ ನಟನಾಗಬೇಕೆಂದು ಸ್ಯಾಂಡಲ್ ವುಡ್ ಗೆ ಪ್ರವೇಶಿಸಿದರೂ ಕೂಡ ನಟನೆಗಿಂತ ಮೊದಲು ನಿರ್ದೇಶನದಲ್ಲಿ ಅನುಭವ ಗಳಿಸಿದರೆ ಉತ್ತಮ ಎಂದು ಅವರಿಗೆ ಅನ್ನಿಸಿ ನಿರ್ದೇಶನ ಕೈಗೆತ್ತಿಕೊಂಡರು. ಇದರಿಂದ ರಿಕ್ಕಿ, ಕಿರಿಕ್ ಪಾರ್ಟಿ ಚಿತ್ರಗಳನ್ನು ನಿರ್ದೇಶಿಸಿ ಗೆಲುವು ಕಂಡರಲ್ಲದೆ ಇದೀಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ ಮತ್ತು ಕಥಾ ಸಂಗಮದಂತಹ ಚಿತ್ರಗಳನ್ನು ನಿರ್ದೇಶಿಸಿದ್ದು ಅವಿನ್ನೂ ಬಿಡುಗಡೆಯಾಗಬೇಕಿದೆ.