'ಕರ್ನಿ' ಸಸ್ಪೆನ್ಸ್ ಚಿತ್ರದಲ್ಲಿ ದುನಿಯಾ ರಶ್ಮಿ ಕಮಾಲ್

ದುನಿಯಾ ರಶ್ಮಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟು ಬರೋಬ್ಬರಿ ಒಂದು ದಶಕ ಕಳೆದಿದೆ.ದಶಕದ ನಂತರ ರಶ್ಮಿ ಅಭಿನಯದ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ 'ಕರ್ನಿ' ..
ರಶ್ಮಿ
ರಶ್ಮಿ
ಬೆಂಗಳೂರು: ದುನಿಯಾ ರಶ್ಮಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟು ಬರೋಬ್ಬರಿ ಒಂದು ದಶಕ ಕಳೆದಿದೆ.ದಶಕದ ನಂತರ ರಶ್ಮಿ ಅಭಿನಯದ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ 'ಕಾರ್ನಿ' ಸದ್ದಿಲ್ಲದೇ ಶೂಟಿಂಗ್ ಮುಗಿಸಿದೆ.
ಈ ಚಿತ್ರವನ್ನು ವಿನೋದ್‌ ಕುಮಾರ್‌ ನಿರ್ದೇಶಿಸಿದ್ದಾರೆ. ಈ ಹಿಂದೆ "ಲೈಫ್ ಸೂಪರ್‌' ನಿರ್ದೇಶಿಸಿದ್ದ ವಿನಿ, "ಕಾರ್ನಿ'ಗೆ ಕಥೆ, ಚಿತ್ರಕಥೆಯನ್ನೂ ಬರೆದಿದ್ದಾರೆ. ಅಂದಹಾಗೆ, ಇಲ್ಲಿ ರಶ್ಮಿಯೇ ಹೈಲೆಟ್‌
ಶಿವಮೊಗ್ಗ, ಬೆಂಗಳೂರು . ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವು ಕಡೆ ಶೂಟಿಂಗ್ ನಡೆಸಲಾಗಿದೆ. 
ನಾನಿಲ್ಲಿ ಕಾದಂಬರಿಗಾರ್ತಿಯಾಗಿ ಕಾಣಿಸಿಕೊಂಡಿದ್ದೇನೆ. ನಾಲ್ವರು ಹುಡುಗಿಯರ ಜೊತೆಗೆ ನಾನು ಕೂಡ ಒಂದು ಕಡೆ ಪಯಣ ಬೆಳೆಸುತ್ತೇನೆ. ಅಲ್ಲಿ, ನನ್ನೊಂದಿಗಿನ ನಾಲ್ವರು ಹುಡುಗಿಯರು ಕಾಣೆಯಾಗುತ್ತಾರೆ. ಅವರೆಲ್ಲಾ ಹೇಗೆ ಮಿಸ್‌ ಆದರು ಎಂಬುದು ಸಸ್ಪೆನ್ಸ್‌ ಎಂದಪು ರಶ್ಮಿ ಹೇಳಿದ್ದಾರೆ.
ಸದ್ಯ ಕಾರ್ನಿ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ಈ ತಿಂಗಳ ಅಂತ್ಯದಲ್ಲಿ ಬಿಡುಗಡೆಯಾಗಲಿದೆ.
ಚಿತ್ರಕ್ಕೆ ಸೂರ್ಯೋದಯ ಅವರು ಕ್ಯಾಮೆರಾ ಹಿಡಿದಿದ್ದು, ಅರಿಂದಮ್ ಗೋಸ್ವಾಮಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಆಗಸ್ಟ್ ತಿಂಗಳಲ್ಲಿ ಕಾರ್ನಿ ನೋಡುವ ಅವಕಾಶ ಕನ್ನಡ ಪ್ರೇಕ್ಷಕರಿಗೆ ಸಿಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com