ಬೆಂಗಳೂರು: ಡಾ. ವಿಷ್ಣುವರ್ಧನ್ ಮತ್ತು ರೆಬೆಲ್ ಸ್ಟಾರ್ ಅಂಬರೀಷ್ ಅವರನ್ನು ಕನ್ನಡ ಸಿನಿಮಾ ರಂಗಕ್ಕೆ ಪರಿಚಯಿಸಿದ ನಾಗರಹಾವು ಸಿನಿಮಾ ಜುಲೈ 20ರಂದು ಮರು ಬಿಡುಗಡೆಯಾಗಲಿದೆ.
ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಚಿತ್ರವನ್ನು ರವಿಚಂದ್ರನ್ ತಂದೆ ಎನ್. ವೀರಾಸ್ವಾಮಿ ನಿರ್ಮಾಣ ಮಾಡಿದ್ದರು. ನಾಗರಹಾವು ಸಿನಿಮಾ ಈಗ ಸರೌಂಡ್ ಸೌಂಡ್ 7.1 ಹಾಗೂ ಡಿಜಿಟಲ್ ಇಮೇಜಿಂಗ್ ಜೊತೆಗೆ 2ಕೆ ರೆಸ್ಲ್ಯೂಷನ್ನಲ್ಲಿ ಮರುನಿರ್ಮಾಣಗೊಂಡಿದ್ದು, ವಿಷ್ಣು ಅಭಿಮಾನಿಗಳಿಗೆ ಮತ್ತೆ ರಾಮಾಚಾರಿಯನ್ನ‘ ಹೊಸ ರೂಪದಲ್ಲಿ ತೋರಿಸಲಾಗುತ್ತಿದೆ.
1973ರಲ್ಲಿ ಈ ಸಿನಿಮಾ ನಿರ್ಮಾಣವಾಗಿತ್ತು ಆರತಿ, ಕೆ.ಎಸ್ ಅಶ್ವತ್, ಮತ್ತಿತರರು ಸಿನಿಮಾದಲ್ಲಿ ನಟಿಸಿದ್ದರು ವಿಜಯ್ ಭಾಸ್ಕರ್ ಸಂಗೀತ್ ನಿರ್ದೇಶಿಸಿದ್ದು, ಚಿಟ್ಟಿಬಾಬು ಸಿನಿಮಾಟೋಗ್ರಾಫ್ ಮಾಡಿದ್ದಾರೆ.