'ಭೈರಾದೇವಿ' ಗಾಗಿ ಹರಿದ್ವಾರಕ್ಕೆ ತೆರಳಿದ ರಮೇಶ್ ಅರವಿಂದ್

ಶಮಿಕಾ ಎಂಟರ್ ಪ್ರೈಸಸ್ ನಲ್ಲಿ ನಿರ್ಮಾಣವಾಗುತ್ತಿರುವ ಭೈರಾದೇವಿ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದು, ಶೂಟಿಂಗ್ ಗಾಗಿ ಹರಿದ್ವಾರ...
ರಮೇಶ್ ಅರವಿಂದ್ ಮತ್ತು ರಾಧಿಕಾ
ರಮೇಶ್ ಅರವಿಂದ್ ಮತ್ತು ರಾಧಿಕಾ
ಬೆಂಗಳೂರು: ನಟ  ರಮೇಶ್ ಅರವಿಂದ್ ಸದ್ಯಕ್ಕೆ ಬಟರ್ ಪ್ಲೈ ಮತ್ತು ಪ್ಯಾರಿಸ್ ಪ್ಯಾರಿಸ್ ಎಂಬ ದ್ವಿಭಾಷಾ ಚಿತ್ರ ನಿರ್ದೇಶಿಸುತ್ತಿದ್ದು, ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ, ಜೊತೆಗೆ ಕಿರುತೆರೆಯಲ್ಲಿ ಕನ್ನಡದ ಕೋಟ್ಯಾಧಿಪತಿ ಎಂಬ ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದಾರೆ.
ಇದರ ಜೊತೆಗೆ ಶಮಿಕಾ ಎಂಟರ್ ಪ್ರೈಸಸ್ ನಲ್ಲಿ ನಿರ್ಮಾಣವಾಗುತ್ತಿರುವ ಭೈರಾದೇವಿ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದು, ಶೂಟಿಂಗ್ ಗಾಗಿ ಹರಿದ್ವಾರಕ್ಕೆ ತೆರಳಿದ್ದಾರೆ. 
ರಾಧಿಕಾ ಕುಮಾರ ಸ್ವಾಮಿ ನಿರ್ಮಿಸಿ, ನಟಿಸುತ್ತಿರುವ ಭೈರಾದೇವಿಯಲ್ಲಿ ಅನು ಪ್ರಭಾಕರ್ ಮತ್ತು ಸ್ಕಂದ ಅಶೋಕ್ ನಟಿಸಿದ್ದಾರೆ, 12 ದಿನಗಳ ಶೂಟಿಂಗ್ ಮಾತ್ರ ಬಾಕಿ ಉಳಿದಿದೆ.ಅದರೆ ಜೊತೆಗೆ ಸ್ವಲ್ಪ ಡಬ್ಬಿಂಗ್ ಮಾತ್ರ ಇದೆ ಎಂದು ರಮೇಶ್ ತಿಳಿಸಿದ್ದಾರೆ.
ರಮೇಶ್ ಮುಂದಿನ ಪ್ರಾಜೆಕ್ಟ್ ಆಕಾಶ್ ಶ್ರೀವತ್ಸ ಜೊತೆ ಮಾಡಲಿದ್ದು ಸೆಪ್ಟಂಬರ್ ತಿಂಗಳಲ್ಲಿ ಆರಂಭವಾಗಲಿದೆ. ರಿಯಾಲಿಟಿ ಶೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು,  ಪ್ರತಿಯೊಂದು ಎಪಿಸೋಡ್ ಉತ್ತಮವಾಗಿ ಮೂಡಿ ಬರುತ್ತಿದ್ದು ಪ್ರತಿಭಾನ್ವಿತರು ಮುಂದೆ ಬರುತ್ತಿದ್ದಾರೆ ಎಂದು ಹೇಳಿದ್ದಾರೆ, ಬಾಲಿವುಡ್ ನ ಕ್ವೀನ್ ರಿಮೇಕ್ ಸಿನಿಮಾ ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com