ಬೆಂಗಳೂರು: ಮಂಜು ಮಾಂಡವ್ಯ ನಿರ್ದೇಶನದ ಶ್ರೀ ಭರತ ಬಾಹುಬಲಿ ಸಿನಿಮಾದಲ್ಲಿ ಅಲುಮೇಲಮ್ಮ ಖ್ಯಾತಿಯ ರಿಷಿ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ.
ಸಾರಾ ಹರೀಶ್ ಮತ್ತು ಚಿಕ್ಕಣ್ಣ ಮುಖ್ಯ ಭೂಮಿಕೆಯಲ್ಲಿದ್ದಾರೆ. ಮಂಜು ಜೊತೆ ರಿಷಿ ಹಾಗೂ ಸಾರಾ ಹರೀಶ್ ಇದ್ದಾರೆ,ಸಿನಿಮಾದ ಆರಂಭದಲ್ಲಿ ರಿಷಿ ಪಾತ್ರವಿದೆ. ಪ್ರೇಕ್ಷಕರಿಗೆ ಭರತ ಬಾಹುಬಲಿ ಬಗ್ಗೆ ವಿವರಣೆ ನೀಡಲಿದ್ದಾರೆ.
ಮೈಸೂರಿನಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಿದ್ದು, ಸದ್ಯ ಚಿತ್ರ ತಂಡ ಶ್ರವಣ ಬೆಳಗೊಳದಲ್ಲಿದೆ, ಬರವಣಿಗೆ ಮತ್ತು ನಿರ್ದೇಶನ ಜೊತೆಗೆ ಮಂಜು ಮಾಂಡವ್ಯ ಸಂಭಾಷಣೆ ಹಾಗೂ ಸಾಹಿತ್ಯ ಇದೆ. ಮಣಿಕಾಂತ್ ಕದ್ರಿ ಸಂಗೀತವಿದೆ.