ಆಪರೇಶನ್ ಅಲಮೇಲಮ್ಮ ಮೂಲಕ ಸ್ಯಾಂಡಲ್ ವುಡ್ ಗೆ ನಾಯಕನಾಗಿ ಪಾದಾರ್ಪಣೆ ಮಾಡಿದ ನಟ ರಿಷಿ ಇಸ್ಲಾದ್ದೀನ್ ನಿರ್ದೇಶನದ ಚಿತ್ರಕ್ಕಾಗಿ ಸಿದ್ ಆಗಿ ಬದಲಾಗುತ್ತಿದ್ದಾರೆ. ನಿನ್ನೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿರುವ ನಟ ರಿಷಿಯ ಮುಂದಿನ ಚಿತ್ರದ ಬಗ್ಗೆ ಸದ್ಯದಲ್ಲಿಯೇ ಅಧಿಕೃತ ಘೋಷಣೆ ಹೊರಬೀಳಲಿದೆ.
ಅಮ್ರೇಜ್ ಸೂರ್ಯವಂಶ ನಿರ್ದೇಶನದಲ್ಲಿ ಸಿದ್ ಚಿತ್ರ ಮೂಡಿಬರಲಿದೆ. ರಿಷಿ ಮತ್ತು ಇಸ್ಲಾದ್ದೀನ್ ಉತ್ತಮ ಸ್ನೇಹಿತರು.
ಆಪರೇಷನ್ ಅಲಮೇಲಮ್ಮ ಮೂಲಕ ಗುರುತಿಸಿಕೊಂಡಿರುವ ನಟ ರಿಷಿ ತಮ್ಮ ಮುಂದಿನ ಚಿತ್ರವನ್ನು ಆರಿಸಿಕೊಳ್ಳುವಲ್ಲಿ ಜಾಗರೂಕರಾಗಿದ್ದಾರೆ. ಈ ಮಧ್ಯೆ ಹೇಮಂತ್ ಎ ರಾವ್ ನಿರ್ದೇಶನದ ಕವಲು ದಾರಿಯ ಶೂಟಿಂಗ್ ಮುಗಿಸಿದ್ದಾರೆ. ಮಂಜು ಮಾಂಡವ್ಯ ನಿರ್ದೇಶನದ ಶ್ರೀ ಭರತ ಬಾಹುಬಲಿಯಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದ ರಿಷಿ ಜಾಕಬ್ ವರ್ಗೀಸ್ ನಿರ್ಮಾಣದ ಮತ್ತೊಂದು ಇನ್ನೂ ಹೆಸರಿಡದ ಚಿತ್ರಕ್ಕೆ ಜೊತೆಯಾಗಲಿದ್ದಾರೆ.
Advertisement