ಹರಿದ್ವಾರದ ಗಂಗಾ ನದಿಯಲ್ಲಿ ನಟಿ ಶ್ರೀದೇವಿ ಚಿತಾಭಸ್ಮ ವಿಸರ್ಜನೆ

ಇತ್ತೀಚೆಗೆ ನಿಧನರಾದ ಬಾಲಿವುಡ್ ನಟಿ ಶ್ರೀದೇವಿ ಅವರ ಚಿತಾಭಸ್ಮವನ್ನು ಉತ್ತರ ಪ್ರದೇಶದ ಹರಿದ್ವಾರ ಬಳಿಯ ಗಂಗಾ ನದಿಯಲ್ಲಿ ಪತಿ ಬೋನಿ ಕಪೂರ್ ಗುರುವಾರ ...
ಶ್ರೀದೇವಿ-ಬೋನಿ ಕಪೂರ್
ಶ್ರೀದೇವಿ-ಬೋನಿ ಕಪೂರ್
Updated on
ಡೆಹ್ರಾಡೂನ್: ಇತ್ತೀಚೆಗೆ ನಿಧನರಾದ  ಬಾಲಿವುಡ್ ನಟಿ ಶ್ರೀದೇವಿ  ಅವರ ಚಿತಾಭಸ್ಮವನ್ನು ಉತ್ತರ ಪ್ರದೇಶದ ಹರಿದ್ವಾರ ಬಳಿಯ ಗಂಗಾ ನದಿಯಲ್ಲಿ ಪತಿ ಬೋನಿ ಕಪೂರ್  ಗುರುವಾರ ವಿಸರ್ಜಿಸಿದ್ದಾರೆ.
ಬೋನಿ ಕಪೂರ್ ಜೊತೆ ರಾಜ್ಯ ಸಭಾ ಸದಸ್ಯ ಅಮರ್ ಸಿಂಗ್, ಬೋನಿಕಪೂರ್ ಸಹೋದರ ಅನಿಲ್ ಕಪೂರ್ ಸೇರಿದಂತೆ ಕುಟುಂಬದ ಹಲವು ಸದಸ್ಯರು ಭಾಗವಹಿಸಿದ್ದರು.
ಗಂಗಾ ನದಿಯ ವಿಐಪಿ ಘಾಟ್ ನಲ್ಲಿ ವಿಧಿವಿಧಾನಗಳು ನಡೆಯುವ ವೇಳೆ ಶ್ರೀದೇವಿ ಅವರನ್ನು ನೆನೆದು ಪತಿ ಬೋನಿಕಪೂರ್ ಕುಸಿದು ಬಿದ್ದರು, ಈ ವೇಳೆ ಅನಿಲ್ ಕಪೂರ್ ಅವರನ್ನು ಸಮಾಧಾನ ಪಡಿಸಿದರು.
ಉತ್ತರಾಖಂಡ್ ಕೃಷಿ ಸಚಿವ ಸುಬೋದ್ ಉನಿಯಾಲ್ ಮತ್ತು ಹರಿದ್ವಾರ್ ಮೇಯರ್ ಮನೋಜ್ ಗಾರ್ಗ್ ಈ ವೇಳೆ ಹಾಜರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com