ತಮಿಳು ನಟಿ ಮಧು ಬೆಂಗಳೂರಿಗೆ ಏಕೆ ಬಂದಿದ್ದರು ಎಂಬುದಕ್ಕೆ ಉತ್ತರ ಸಿಕ್ಕಿದೆ. ಕಳೆದ ಮಂಗಳವಾರ ಅವರು ಸೀತಾರಾಮ ಕಲ್ಯಾಣ ತಂಡವನ್ನು ಸೇರಿಕೊಂಡಿದ್ದಾರೆ. ರೋಜಾ ಚಿತ್ರದಲ್ಲಿ ನಟಿಸಿದ್ದ ಮಧು ಇಲ್ಲಿ ರಚಿತಾ ರಾಮ್ ಅವರ ತಾಯಿಯಾಗಿ ಅಭಿನಯಿಸುತ್ತಿದ್ದಾರೆ. ಹರ್ಷ ನಿರ್ದೇಶನದ ಈ ಚಿತ್ರದಲ್ಲಿ ರಚಿತಾ ರಾಮ್ ಮತ್ತು ನಿಖಿಲ್ ಕುಮಾರ್ ಅಭಿನಯಿಸುತ್ತಿದ್ದಾರೆ.
ಕಂಠೀರವ ಸ್ಟುಡಿಯೊದಲ್ಲಿ ಶೂಟಿಂಗ್ ನಡೆಯುತ್ತಿದ್ದು ಬಿಗ್ ಬಜೆಟ್ ಚಿತ್ರದಲ್ಲಿ ಹಲವು ಹೊಸಬರು ನಟಿಸುತ್ತಿದ್ದಾರೆ.
ಬಾಲಿವುಡ್ ಮತ್ತು ದಕ್ಷಿಣ ಭಾರತೀಯ ಚಿತ್ರರಂಗ ಕಲಾವಿದರ ಸಮಾಗಮ ಇಲ್ಲಿ ಆಗುತ್ತಿದೆ. ನಟ ರವಿಶಂಕರ್ ಕೂಡ ತಮ್ಮ ಭಾಗದ ಚಿತ್ರೀಕರಣವನ್ನು ಆರಂಭಿಸಿದ್ದಾರೆ. ಈ ವಾರ ತಮ್ಮ ಭಾಗದ ಚಿತ್ರೀಕರಣವನ್ನು ಆರಂಭಿಸಿರುವ ಮಧು ಈ ಬಗ್ಗೆ ಖುಷಿಯಿಂದ ಟ್ವೀಟ್ ಮಾಡಿದ್ದಾರೆ.
1993ರಲ್ಲಿ ಅಣ್ಣಯ್ಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಮಧು ಸುದೀಪ್ ನಟನೆಯ ರನ್ನ ಮತ್ತು ಪ್ರೀತಂ ಗುಬ್ಬಿ ನಿರ್ದೇಶನದ ನಾನು ಮತ್ತು ವರಲಕ್ಷ್ಮಿಯಲ್ಲಿ ಕೂಡ ಅಭಿನಯಿಸಿದ್ದರು. ಇದು ಅವರ 5ನೇ ಕನ್ನಡ ಚಿತ್ರ.
Advertisement