ತಮ್ಮ ಚೊಚ್ಚಲ ಚಿತ್ರ ಗುಲ್ಟು ಮೂಲಕ ಭಾರೀ ಸುದ್ದಿಯಾದವರು ನಟ ನವೀನ್ ಶಂಕರ್. ಸೈಬರ್ ಕ್ರೈಮ್ ಬಗ್ಗೆ ಜನಾರ್ದನ್ ಚಿಕ್ಕಣ್ಣ ಮಾಡಿರುವ ಸಿನಿಮಾಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಮಾತ್ರವಲ್ಲದೆ ನಟ ನವೀನ್ ಶಂಕರ್ ಕೂಡ ಮೊದಲ ಚಿತ್ರದ ಮೂಲಕ ಭರವಸೆ ಮೂಡಿಸಿದ್ದಾರೆ.
ಈ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಅವರಿಗೆ ಹಲವು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. 50 ದಿನಗಳ ಪ್ರದರ್ಶನ ಪೂರೈಸುತ್ತಿರುವ ಗುಲ್ಟು ಒಂದೆಡೆಯಾದರೆ ನವೀನ್ ರೊಮಾಂಟಿಕ್ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ. ಮೂರು ವಿಭಿನ್ನ ವಿಷಯಗಳ ಕಥೆಯನ್ನು ಕೇಳಿದ ನವೀನ್ ಪ್ರೀತಿ, ಪ್ರೇಮ ಕುರಿತ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಚಿತ್ರತಂಡ ಈ ಬಗ್ಗೆ ಇನ್ನೂ ಘೋಷಣೆ ಮಾಡಿಲ್ಲ. ಆದರೆ ಸಿಟಿ ಎಕ್ಸ್ ಪ್ರೆಸ್ ಗೆ ಕೆಲವು ಮಾಹಿತಿ ಸಿಕ್ಕಿದೆ.
ಇನ್ನೂ ಹೆಸರಿಡದ ಚಿತ್ರವನ್ನು ದತ್ತಾತ್ರೇಯ ಎಂಬ ಹೊಸ ನಿರ್ದೇಶಕರು ನಿರ್ದೇಶಿಸುತ್ತಿದ್ದಾರೆ. ಪರಮೇಶ್ ನಿರ್ಮಾಣದ ಚಿತ್ರ ಪಿ2 ಪ್ರೊಡಕ್ಷನ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿದೆ. ಪರಮೇಶ್ ಈ ಹಿಂದೆ ಗಣಪ, ಪಾರಿಜಾತ, ಜೀವ ಮತ್ತು ಪಲ್ಲಕ್ಕಿ ಚಿತ್ರ ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಮುಂಗಾರು ಮಳೆ ಖ್ಯಾತಿಯ ಮನೋಮೂರ್ತಿ ಸಂಗೀತ ಒದಗಿಸಲಿದ್ದಾರೆ.
Advertisement