ಬೆಂಗಳೂರು: ನಟ ದುನಿಯಾ ವಿಜಯ್ ಅವರ ಪತ್ನಿಯರ ಜಗಳ ಕೋರ್ಟ್ ಮೆಟ್ಟಿಲೇರಿದ್ದು, ವಿಜಿ ಮನೆಗೆ ತೆರಳದಂತೆ ಮೊದಲ ಪತ್ನಿ ನಾಗರತ್ನಗೆ ಕೋರ್ಟ್ ನಿರ್ಬಂಧ ಹೇರಿದೆ.
ವಿಜಯ್ ಮನೆಗೆ ಹೋಗದಂತೆ ನಾಗರತ್ನಗೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ಮಧ್ಯಂತರ ಆದೇಶ ನೀಡುವುದರ ಜೊತೆಗೆ ವಿಜಯ್ ವಿರುದ್ಧ ಮಾಧ್ಯಮಗಳಿಗೆ ಸಂದರ್ಶನ ನೀಡುವಂತಿಲ್ಲ. ದುನಿಯಾ ವಿಜಿ ಆಗಲಿ ಅವರ ಕುಟುಂಬಸ್ಥರ ವಿರುದ್ಧವೂ ಬಹಿರಂಗವಾಗಿ ಹೇಳಿಕೆ ನೀಡುವಂತಿಲ್ಲ ಎಂದು ಕೋರ್ಟ್ ಸೂಚಿಸಿದೆ.
ಇತ್ತೀಚೆಗಷ್ಟೆ ವಿಜಿ ಮನೆಗೆ ಹೋಗಿದ್ದ ನಾಗರತ್ನ ಎರಡನೇ ಪತ್ನಿ ಕೀರ್ತಿ ಮೇಲೆ ಹಲ್ಲೆ ನಡೆಸಿದ್ದರು. ಅದಾದ ನಂತರ ವಿಚ್ಛೇದನ ಕೋರಿ ವಿಜಯ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್ ನಾಗರತ್ನ ಅವರು ವಿಜಯ್ ಮನೆಗೆ ತೆರಳದಂತೆ ನಿರ್ಬಂಧ ಹೇರಿದೆ.