ಚೆನ್ನೈ: ಆಡಳಿತರೂಢ ಎಐಎಡಿಎಂಕೆ ಸರ್ಕಾರದ ಒತ್ತಡಕ್ಕೆ ಮಣಿದು ನಟ ವಿಜಯ್ ಅಭಿನಯದ `ಸರ್ಕಾರ್' ಚಿತ್ರದಲ್ಲಿನ ನಾಲ್ಕು ದೃಶ್ಯಗಳಿಗೆ ಚಿತ್ರದ ನಿರ್ಮಾಪಕರು ಕತ್ತರಿ ಹಾಕಿದ ನಂತರ ವಿಜಯ್ ಅಭಿಮಾನಿಗಳು ತಮಿಳುನಾಡು ಸರ್ಕಾರ ತಮಗೆ ಉಚಿತವಾಗಿ ನೀಡಿದ್ದ ಮಿಕ್ಸಿ, ಗ್ರೈಂಡರ್, ಲ್ಯಾಪ್ ಟಾಪ್ ಗಳನ್ನು ಪುಡಿ ಮಾಡಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.