ಬೆಂಗಳೂರು: ವೈಭವ್ ನಟನೆಯ ತಾರಕಾಸುರ ಸಿನಿಮಾ ನಿರ್ಮಾಪಕ ಆರ್ ಎಸ್ ಶ್ರೀನಿವಾಸ್ ಹಂಚಿಕೆ ಹಕ್ಕು ತೆಗೆದುಕೊಂಡಿದ್ದಾರೆ.
ವಿಶಾಲ ಕರ್ನಾಟಕಕ್ಕೆ ಹಂಚಿಕೆಗಾಗಿ ಬಹದ್ದೂರ, ಭರ್ಜರಿ ಹಾಗೂ ತೆಲುಗಿನ ಬಾಹುಬಲಿ ಸಿನಿಮಾ ಹಂಚಿಕೆದಾರರು ಶನಿವಾರ ಸಿನಿಮಾ ವೀಕ್ಷಿಸಿದ್ದಾರೆ. ನವೆಂಬರ್ 23 ರಂದು ಸಿನಿಮಾ ರಿಲೀಸ್ ಆಗಲಿದೆ.
ರಥಾವರ ಸಿನಿಮಾ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಈ ಸಿನಿಮಾ ನಿರ್ದೇಶಿಸಿದ್ದಾರೆ, ವೈಭವ್ ಗೆ ಇದು ಮೊದಲ ಚಿತ್ರವಾಗಿದೆ, ವೈಭವ್ ಥೀಯೇಟರ್ ಮಾಲೀಕ ನರಸಿಂಹಲು ಮಗ, ಮಾನ್ವಿತಾ ಕಾಮತ್ ನಾಯಕಿಯಾಗಿದ್ದಾರೆ. ಹಾಲಿವುಡ್ ನಟ ಡ್ಯಾನಿ ಸಪಾನಿ ಖಳನಾಯಕನಾಗಿ ನಟಿಸಿದ್ದಾರೆ.