ಬೆಂಗಳೂರು: ವಿಜಯ್ ಕಿರಣ್ ನಿರ್ದೇಶನದ ಹೊಸ ಚಿತ್ರಕ್ಕೆ ಚಿರಂಜೀವಿ ಸರ್ಜಾಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಲಿದ್ದಾರೆ,
ಕಿರುತೆರೆ ಮೂಲಕ ಹಿರಿತೆರೆಗೆ ಬಂದಿರುವ ಅದಿತಿ ಅಜಯ್ ರಾವ್ ನಟನೆಯ ಧೈರ್ಯಂ ಸಿನಿಮಾದಲ್ಲಿ ನಟಿಸಿದ್ದರು. ಉದಯ್ ಮೆಹ್ತಾ ನಿರ್ಮಾಣದ 8ನೇ ಸಿನಿಮಾ ಇದಾಗಿದೆ, ಮುಹೂರ್ತದ ದಿನದಂದೇ ಸಿನಿಮಾ ಟೈಟಲ್ ಬಹಿರಂಗಗೊಳಿಸಲಾಗುತ್ತದೆ,
ಸಿನಿಮಾಜದಲ್ಲಿ ಚಿರಂಜೀವಿ ತಾಯಿಯಾಗಿ ಪಾತ್ರದಲ್ಲಿ ತಾರಾ ನಟಿಸಲಿದ್ದಾರೆ,ಧರ್ಮ ಸಿನಿಮಾಗೆ ಸಂಗೀತ ನೀಡಿದ್ದಾರೆ, ಸಿನಿಮಾ ರಂಗಕ್ಕೆ ಹೊಸಬರಾಗಿರುವ ಅದಿತಿ ಪ್ರಭು ಕೈ ತುಂಬಾ ಸಾಕಷ್ಟು ಅವಕಾಶಗಳಿವೆ, ಆಪರೇಷನ್ ನಕ್ಷತ್ರ, ಜಗ್ಗೇಶ್ ನಟನೆಯ ತೋತಾಪುರಿಯಲ್ಲೂ ನಟಿಸಿದ್ದಾರೆ.