ನಾನು ಆಸ್ಪತ್ರೆಗೆ ಹೋದಾಗ ಅಭಿಶೇಕ್ ತಂದೆಯ ಮೃತ ದೇಹದ ಮುಂದೆ ಸುಮ್ಮನೆ ನಿಂತಿದ್ದ. ಆಗ ಅಭಿಯನ್ನು ನಾನು ಮಾತನಾಡಿಸಿದೆ. ತಂದೆಯನ್ನು ಕಳೆದುಕೊಂಡಿದ್ದು ಇಂತಹ ಪರಿಸ್ಥಿತಿಯಲ್ಲಿ ಸುಮ್ಮನಿದ್ದಿಯಲ್ಲ ಎಂದು ಪ್ರಶ್ನಿಸಿದೆ. ಅದಕ್ಕೆ ಅಭಿ ನಾನು ಅತ್ತರೆ ಅಮ್ಮನ ದುಃಖ ಇನ್ನು ಜಾಸ್ತಿಯಾಗುತ್ತದೆ. ಅವರ ಮನಸ್ಸು ಇನ್ನಷ್ಟು ರೋದಿಸುತ್ತದೆ ಎಂದು ಆತ ಹೇಳಿದ ಮಾತು ಕೇಳಿ ನನಗೆ ನೋವಾಗಿತ್ತು ಎಂದು ಹೇಳಿದ್ದಾರೆ.