ಕನ್ನಡ ಹೋರಾಟಗಾರರ ಯುವ ಸಂಘಟನೆಗಳ ಅಧ್ಯಕ್ಷ ಆರ್ ಹರೀಶ್ ಮಾತನಾಡಿ ಸನ್ನಿ ಲಿಯೋನ್ ಅಂತಹಾ ನಟಿ ಹಿಂದೂಧರ್ಮದ ಐತಿಹಾಸಿಕ ರಾಣಿಯ ಪಾತ್ರ ಮಾಡುವುದು ಬೇಡ ಎಂದಿದ್ದಾರೆ. "ಸನ್ನಿ ಅಶ್ಲೀಲ ಪಾತ್ರಗಳನ್ನು ಮಾಡಿ ಜನಪ್ರಿಯತೆ ಗಳಿಸಿದವರು. ಇಂತಹಾ ವ್ಯಕ್ತಿಯು ಐತಿಹಾಸಿಕ ಪಾತ್ರವನ್ನು ನಿರ್ವಹಿಸುವುದು ಸರಿಯಲ್ಲ.ಮಹಾದೇವಿ ಕರ್ನಾಟಕದ ಪರಂಪರೆಯಲ್ಲಿ ಗುರುತಿಸಲ್ಪಡುವ ಮಹತ್ವದ ರಾಣಿಯಾಗುದ್ದಾರೆ. ಅವರು ಅನೇಕ ದೇವಾಲಯಗಳನ್ನು ಕಟ್ಟಿದ್ದಾರೆ.ಆದರೆ ಇಂತಹಾ ರಾಣಿಯೊಬ್ಬರ ಪಾತ್ರವನ್ನು ಸನ್ನಿಯವರು ಅಭಿನಯಿಸುವುದರಿಂದ ಹಿಂದೂಗಳ, ಕನ್ನಡಿಗರ ಭಾವನೆಗೆ ಧಕ್ಕೆಯಾಗಲಿದೆ"