ಪ್ರಚಾರ ಒಳ್ಳೆಯದು, ಆದರೆ ಅದು ಮಿತಿ ಮೀರಿದರೆ ಒಳ್ಳೆಯದಾ? ಪಬ್ಲಿಸಿಟಿ ಅಂದರೆ ಏನು? ಒಬ್ಬ ಮನುಷ್ಯನ ಕುಟುಂಬವನ್ನೇ ನುಚ್ಚುನೂರು ಮಾಡೋದಾ? ಅವರ ಹೆಂಡತಿ, ಮಕ್ಕಳಿಗೆ ಬೇಸರ ಉಂಟು ಮಾಡುವುದಾ? ಚಿತ್ರರಂಗದಲ್ಲಿ 15 ರಿಂದ 20 ವರ್ಷ ಹೋರಾಡಿ ಕಟ್ಟಿಕೊಂಡಿದ್ದ ವ್ಯಕ್ತಿತ್ವವನ್ನು ಹಾಳು ಮಾಡುವುದಾ? ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಶೃತಿ ಪ್ರಚಾರಕ್ಕಾಗಿ ಅರ್ಜನ್ ಸರ್ಜಾ ವಿರುದ್ಧ ಆರೋಪ ಮಾಡಿದ್ದಾರೆ ಎಂದು ಹೇಳಿದ್ದಾರೆ.