ತಿಥಿ ಸಿನಿಮಾದಂತೆ ಇದರಲ್ಲಿ ಕಲಾವಿದರಲ್ಲದವರನ್ನು ಆಯ್ಕೆ ಮಾಡಿ ಸಿನಿಮಾದಲ್ಲಿ ಅಭಿನಯ ಮಾಡಿಸಲಾಗಿದೆ ಎಂದು ಜೈ ಶಂಕರ್ ಹೇಳಿದ್ದಾರೆ, ನಾವು ಸರಿಯಾದ ಕಲಾವಿದರನ್ನು ಆಯ್ಕೆ ಮಾಡಿದ್ದೇವೆ, ಆಡಿಷನ್ ನಂತರ ನಾವು ನಿರ್ಮಾಣ ಹಂತದ ನಿವೇಶನಕ್ಕೆತೆರಳಿದೆವು, ಅದರಲ್ಲಿ ಪಾರವ್ವ ನನಗೆ ಕಂಡು ಬಂದರು, ಹುಬ್ಬಳ್ಳಿ ಮೂಲದ ಆಕೆ 40 ವರ್ಷದ ತಾಯಿಪಾತ್ರ ಮಾಡಿದ್ದಾಳೆ, ಗುಲ್ಬರ್ಗಾ ಮೂಲದ ರಾಘವೇಂದ್ರ ಬೆಂಗಳೂರಿನಲ್ಲಿ ಕಾರು ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದು, ಆತ ಬೀರ ಎಂಬ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ,.