ಕಥಾ ಸಂಗಮ ಅಂತಿಮ ಹಂತದ ಶೂಟಿಂಗ್ ಪೂರ್ಣ!

ಏಳು ವಿವಿಧ ಸಣ್ಣ ಕಥೆಗಳ ಸಂಕಲನವಾಗಿರುವ ಕಥಾ ಸಂಗಮ ಸಿನಿಮಾ ಶೂಟಿಂಗ್ ಅಂತಿಮ ಹಂತ ತಲುಪಿದೆ. ಎಚ್.ಕೆ ಪ್ರಕಾಶ್ ನಿರ್ಮಿಸುತ್ತಿದ್ದು, ರಿಷಬ್ ಶೆಟ್ಟಿ ..
ಕಥಾ ಸಂಗಮ ಶೂಟಿಂಗ್
ಕಥಾ ಸಂಗಮ ಶೂಟಿಂಗ್
ಬೆಂಗಳೂರು: ಏಳು ವಿವಿಧ ಸಣ್ಣ ಕಥೆಗಳ ಸಂಕಲನವಾಗಿರುವ ಕಥಾ ಸಂಗಮ ಸಿನಿಮಾ ಶೂಟಿಂಗ್ ಅಂತಿಮ ಹಂತ ತಲುಪಿದೆ. ಎಚ್.ಕೆ ಪ್ರಕಾಶ್  ನಿರ್ಮಿಸುತ್ತಿದ್ದು, ರಿಷಬ್ ಶೆಟ್ಟಿ ನಿರ್ದೇಶಿಸುತ್ತಿದ್ದಾರೆ. ಕಿರಣ್ ರಾಜ್, ಚಂದ್ರಜಿತ್ ಬೆಳ್ಳಿಯಪ್ಪ, ಸೇರಿದಂತೆ ಯುವ ನಿರ್ದೇಶಕರುಗಳು ಒಗ್ಗೂಡಿದ್ದಾರೆ.
ಸಿನಿಮಾದಲ್ಲಿ ಹರಿಪ್ರಿಯ, ಕಿಶೋರ್ ಮತ್ತು ಯಜ್ಞಾ ಶೆಟ್ಟಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ, ಲಚ್ಚವ್ವ ಎಂಬ ಟೈಟಲ್ ನ ಕಥೆಯನ್ನು ನವ ನಿರ್ದೇಶಕ  ಜೈಶಂಕರ್ ನಿರ್ದೇಶಿಸಿದ್ದಾರೆ, ನಟನೆಯ ಯಾವು ಅನುಭವವಿಲ್ಲದವರೂ ಸಿನಿಮಾದಲ್ಲಿ ನಟಿಸಿದ್ದಾರೆ, ಇದು ಸಿನಿಮಾದ 20 ನಿಮಿಷದ ಹೈಲೈಟ್ ಆಗಿದೆ,.
ತಿಥಿ ಸಿನಿಮಾದಂತೆ ಇದರಲ್ಲಿ ಕಲಾವಿದರಲ್ಲದವರನ್ನು ಆಯ್ಕೆ ಮಾಡಿ ಸಿನಿಮಾದಲ್ಲಿ ಅಭಿನಯ ಮಾಡಿಸಲಾಗಿದೆ ಎಂದು ಜೈ ಶಂಕರ್ ಹೇಳಿದ್ದಾರೆ,  ನಾವು ಸರಿಯಾದ ಕಲಾವಿದರನ್ನು ಆಯ್ಕೆ ಮಾಡಿದ್ದೇವೆ, ಆಡಿಷನ್ ನಂತರ ನಾವು ನಿರ್ಮಾಣ ಹಂತದ ನಿವೇಶನಕ್ಕೆತೆರಳಿದೆವು,  ಅದರಲ್ಲಿ ಪಾರವ್ವ ನನಗೆ ಕಂಡು ಬಂದರು,  ಹುಬ್ಬಳ್ಳಿ ಮೂಲದ ಆಕೆ 40 ವರ್ಷದ ತಾಯಿಪಾತ್ರ ಮಾಡಿದ್ದಾಳೆ, ಗುಲ್ಬರ್ಗಾ ಮೂಲದ ರಾಘವೇಂದ್ರ ಬೆಂಗಳೂರಿನಲ್ಲಿ ಕಾರು ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದು, ಆತ ಬೀರ ಎಂಬ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ,.
ಈ ಎಪಿಸೋಡ್ ನಂತರ ಕಥಾ ಸಂಗಮದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮಾತ್ರ ಬಾಕಿ ಉಳಿದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com