ಅಪಘಾತದಲ್ಲಿ ನಟರಾದ ದೇವರಾಜ್, ಪ್ರಜ್ವಲ್ ಹಾಗೂ ಕಾರು ಚಾಲಕ ರಾಯ್ ಆಂಟೋನಿ ಗಾಯಗೊಂಡಿದ್ದರು. ನಟ ದೇವರಾಜ್, ಪ್ರಜ್ವಲ್ಗೆ ಸ್ವಲ್ಪಮಟ್ಟಿನ ಗಾಯವಾಗಿದ್ದರಿಂದ ಅವರನ್ನು ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ನಟ ದರ್ಶನ್ ಬಲಗೈ ಮೂಳೆ ಮುರಿದ ಹಿನ್ನಲೆಯಲ್ಲಿ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಿದ ಪರಿಣಾಮ ಇನ್ನು ಆಸ್ಪತ್ರೆಯಲ್ಲಿಯೇ ಇಟ್ಟುಕೊಳ್ಳಲಾಗಿತ್ತು.