ಹೇಮಂತ್ ಹೇಳುವಂತೆ "ಇಂದಿನ ದಿನಗಳಲ್ಲಿ ಪ್ರತಿನಿತ್ಯ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗುತಿದೆ, ಜೀವನಶೈಲಿ ದುಬಾರಿಯಾಗಿದೆ. ಆದರೆ ಪೋಲೀಸ್ ಅಧಿಕಾರಿಗಳಿಗೆ ಸರಿಯಾದ ಸೌಲಭ್ಯಗಳು ಸಿಗುವುದಿಲ್ಲ. ಸಮಾಜ ಅವರನ್ನು ಲಂಚ ಸ್ವೀಕರಿಸುವವರು, ಮಾಮಾಗಳು, ಕಳ್ಳರು ಎಂಬಂತೆ ಕಾಣುತ್ತದೆ. ನಾನು ಈ ಚಿತ್ರಕ್ಕೆ ಕವಲುದಾರಿ ಎಂಬ ಶಿರ್ಷಿಕೆ ಇಡಲು ಮುಖ್ಯ ಕಾರಣೈದುವೆ, ಪೋಲೀಸ್ ಅಧಿಕಾರಿಯೊಬ್ಬರ ಜೀವನ ಎಂದಿಗೂ ಅಡ್ಡ ರಸ್ತೆಗಳಲ್ಲೇ ಸಾಗುತ್ತದೆ ಎನ್ನುವುದು ನನ್ನ ಅಭಿಮತ. ಅವರು ನಿಜ ಹಾಗೂ ಸುಳ್ಳು, ಜೀವನ ಹಾಗೂ ಮರಣ, ವೈಯುಕ್ತಿಕ ಜೀವನ ಹಾಗೂ ವೃತ್ತಿಪರತೆಗಳ ನಡುವೆ ಹೋರಾಡುತ್ತಿರುತ್ತಾರೆ. ಈ ಚಿತ್ರ ಕೊಲೆ ರಹಸ್ಯದ ಕಥನದೊಳಗೊಂದು ಅಂತಃಕಲಹವನ್ನೂ ಹೊಂದಿದೆ,"