ಈ ವಾರ ‘ಪಡ್ಡೆಹುಲಿ’ ಚಿತ್ರದ ಬಿಡುಗಡೆ, ಮುಂದಿನ ತಿಂಗಳು ಮೇ 29ರಂದು ಮಗಳ ಮದುವೆ ಇರುವ ಕಾರಣ ರವಿಚಂದ್ರನ್ ಬಹಳ ಬ್ಯುಸಿ. ಇದರ ನಡುವೆಯೇ ಮಗಳು ಗೀತಾಂಜಲಿಗಾಗಿ ಕವನವೊಂದನ್ನು ರಚಿಸಿ ಸಂಗೀತ ಸಂಯೋಜಿಸಿದ್ದಾರೆ. ಗೌತನ್ ಶ್ರೀವಾತ್ಸವ್ ಹಾಡಿದ್ದಾರೆ.’ಬೆಳೆದ ಮೇಲೆ ನೀನು ನಾನು ಮಗುವಾದೆ. . . ಯಾಕೋ, ಏನೋ ತಿಳಿಯದೇನೆ ಚಡಪಡಿಸಿದೆ ಮನಸು. . ನೋವು, ನಲಿವ ಜೊತೆಗೆ ಸಂಭ್ರಮ ಅಡಗಿದೆ. ಓ ನನ್ನ ಮಗಳೇ” ಎಂಬ ಹಲವು ಭಾವನೆಗಳು ಮಿಶ್ರವಾದ ಹಾಡು ಹೃದಯ ಮುಟ್ಟುವಂತಿದೆ.