ವಿಕೃತನ ಕೆಲಸಕ್ಕೆ ಹೂವೊಂದು ಸುಟ್ಟಿದೆ: ಮಧು ಸಾವಿನ ಕುರಿತು ಯೋಗರಾಜ್ ಭಟ್ ವ್ಯಾಖ್ಯಾನ

ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ರಾಜ್ಯಾದ್ಯಂತ ವ್ಯಾಪಕ ಸದ್ದು ಮಾಡುತ್ತಿದೆ. ಕನ್ನಡ ಚಿತ್ರರಂಗದ ಗಣ್ಯರು , ನಟ ನಟಿಯರು ಸಹ ....
ವಿಕೃತನ ಕೆಲಸಕ್ಕೆ ಹೂವೊಂದು ಸುಟ್ಟಿದೆ: ಮಧು ಸಾವಿನ ಕುರಿತು ಯೋಗರಾಜ್ ಭಟ್ ವ್ಯಾಖ್ಯಾನ
ವಿಕೃತನ ಕೆಲಸಕ್ಕೆ ಹೂವೊಂದು ಸುಟ್ಟಿದೆ: ಮಧು ಸಾವಿನ ಕುರಿತು ಯೋಗರಾಜ್ ಭಟ್ ವ್ಯಾಖ್ಯಾನ
Updated on
ಬೆಂಗಳೂರು: ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ರಾಜ್ಯಾದ್ಯಂತ ವ್ಯಾಪಕ ಸದ್ದು ಮಾಡುತ್ತಿದೆ. ಕನ್ನಡ ಚಿತ್ರರಂಗದ ಗಣ್ಯರು , ನಟ ನಟಿಯರು ಸಹ ಇದನ್ನು ಖಂಡಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೀಚಕರಿಗೆ ತಕ್ಕ ಶಾಸ್ತಿಯಾಗಲಿ ಎಂದು ಟ್ವಿಈಟ್ ಮಾಡಿದ್ದರೆ ಕನ್ನಡದ ಹೆಸರಾಂತ ನಿರ್ದೇಶಕ ಯೋಗರಾಜ್ ಭಟ್ ಒಂದು ಪತ್ರ ಬರೆದು ಮಧು ಸಾವಿಗೆ ಕಂಬನಿ ಮಿಡಿದಿದ್ದಾರೆ.
ದೆಹಲಿಯ ನಿರ್ಭಯಾ ಅಹತ್ಯೆಯಾಗಿದ್ದಾಗ ಇಡೀ ದೇಶಕ್ಕೆ ದೇಸ ಎದ್ದು ಕುಳಿತಿತು . ಆದರೆ ನಮ್ಮದೇ ರಾಜ್ಯದ ರಾಯಚೂರಿನಲ್ಲಿ ನಡೆದ ಘಟನೆಗೆ ಬೆಂಗಳೂರಿನ ಜನತೆ ಏಕೆ ಸ್ಪಂದಿಸುತ್ತಿಲ್ಲ ಎಂದು ಭಟ್ಟರು ತಮ್ಮ ಅಸಹನೆ ಹೊರಹಾಕಿದ್ದಾರೆ.
ವಿಕೃತನೊಬ್ಬನ ಕೆಲಸಕ್ಕೆ ಹೂವೊಂದು ಸುಟ್ಟು ಹೋಗಿದೆ ಎಂದಿರುವ ಯೋಗರಾಜ್ ಭಟ್ ತಮ್ಮ ಪತ್ರದ ಮೂಲಕ ಮಧು ಸಾವಿಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಜತೆಗೆ ಬೆಂಗಳೂರು ಜನತೆಯ ಆಲಸ್ಯವನ್ನು ಖಂಡಿಸಿದ್ದಾರೆ.
ಭಟ್ಟರ ಪತ್ರ ಹೀಗಿದೆ-

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com