ವಿನಯ್ ರಾಜ್ ಸಿನಿಮಾಗೆ ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ನಿರ್ದೇಶನ!

ಕಥೆಗೆ ವಿನಯ್ ತಂದೆ ರಾಘವೇಂದ್ರ ರಾಜ್ ಕುಮಾರ್ ಒಪ್ಪಿಗೆ ಸೂಚಿಸಿದ್ದಾರೆ, ಕೇವಲ ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ, ಮೇ 7 ರಂದು ವಿನಯ್ ಹುಟ್ಟಿದ ಹಬ್ಬವಿದ್ದು, ..
ರವಿ ಬಸ್ರೂರ್ ಮತ್ತು ವಿನಯ್ ರಾಜ್ ಕುಮಾರ್
ರವಿ ಬಸ್ರೂರ್ ಮತ್ತು ವಿನಯ್ ರಾಜ್ ಕುಮಾರ್
ಅನಂತ್ v/s ನುಸ್ರುತ್ ಸಿನಿಮಾ ನಂತರ ನಟ ವಿನಯ್ ರಾಜ್ ಕುಮಾರ್ , ದೇವನೂರು ಚಂದ್ರು ನಿರ್ದೇಶನದ ಗ್ರಾಮಾಯಣ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಇತ್ತೀಚೆಗೆ ಕೇಳಿ ಬರುತ್ತಿರುವ ಮಾತೆಂದರೇ ವಿನಯ್ ರಾಜ್ ಕುಮಾರ್ ಸಿನಿಮಾವನ್ನು ಸಂಗೀತ ನಿರ್ದೇಶಕ ರವಿ ಬಸ್ರೂರ್ ನಿರ್ದೇಶಿಸಲಿದ್ದಾರೆ.
ಸಿನಿಮಾವನ್ನು ಎನ್ ಎಸ್ ಕುಮಾರ್ ನಿರ್ಮಾಣ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ, ಈಗಾಗಲೇ ಚಿತ್ರಕಥೆ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ, ಆದರೆ ಇನ್ನೂ ಯಾವುದ ಫೈನಲ್ ಆಗಿಲ್ಲ, ರವಿ ಬಸ್ರೂರ್ ಕಮರ್ಷಿಯಲ್ ಕಥಾ ಹಂದರ ಒಳಗೊಂಡಿದೆ.
ಕಥೆಗೆ ವಿನಯ್ ತಂದೆ ರಾಘವೇಂದ್ರ ರಾಜ್ ಕುಮಾರ್ ಒಪ್ಪಿಗೆ ಸೂಚಿಸಿದ್ದಾರೆ, ಕೇವಲ ಅಧಿಕೃತ ಘೋಷಣೆ ಮಾತ್ರ ಬಾಕಿ ಉಳಿದಿದೆ, ಮೇ 7 ರಂದು ವಿನಯ್ ಹುಟ್ಟಿದ ಹಬ್ಬವಿದ್ದು, ಅಂದೇ ಘೋಷಿಸುವ ಸಾಧ್ಯತೆಯಿದೆ.
ಎನ್ ಎಸ್ ರಾಜ್ ಕುಮಾರ್ ಮತ್ತು ರವಿ ಬಸ್ರೂರ್  ಒಟ್ಟಿಗೆ ಮಾಡುತ್ತಿರುವ ಸಿನಿಮಾ ಇದಾಗಿದೆ, ಕಟಕ ಮತ್ತು ಗಿರ್ಮಿಟ್ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com