ರಂಗಕರ್ಮಿ, ನಟ ಸುಜಯ್ ಶಾಸ್ತ್ರೀ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ಮೂಲಕ ಚೊಚ್ಚಲ ಬಾರಿಗೆ ನಿರ್ದೇಶಕರಾಗಿದ್ದಾರೆ. ರಾಜ್ ಬಿ ಶೆಟ್ಟಿ ನಾಯಕ ನಟನಾಗಿ ಅಭಿನಯಿಸಿರುವ ಈ ಚಿತ್ರದ ಚಿತ್ರೀಕರಣ ಸಂಪೂರ್ಣಗೊಂಡಿದೆ.
ರಂಗಭೂಮಿಯಲ್ಲಿನ ಕೆಲಸ ಸಿನಿಮಾ ನಿರ್ದೇಶನದತ್ತ ತಳ್ಳಿದೆ. ಆದರೆ, ಚಿತ್ರ ನಿರ್ದೇಶನ ಕೆಲಸ ಹೆಚ್ಚು ಶ್ರಮ ಬೇಡುತ್ತದೆ ಎಂಬುದು ಅನಿಸುತ್ತಿದೆ. 1991ರಲ್ಲಿ ರಂಗಕರ್ಮಿಯಾಗಿ ವೃತ್ತಿ ಆರಂಭಿಸಿದ್ದೆ. ಈಗ ಚಿತ್ರ ನಿರ್ದೇಶನ ಮಾಡಿರುವುದರಿಂದ ಎಕ್ಸೈಟ್ ಆಗಿರುವುದಾಗಿ ಸುಜಯ್ ಹೇಳಿದರು.
Advertisement