ಎಸ್.ವಿ. ರಾಜೇಂದ್ರಸಿಂಗ್ ಬಾಬು ನಿರ್ದೇಶನದ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ನಟನೆಯ ‘ರಾಜವೀರ ಮದಕರಿನಾಯಕ’ ಚಿತ್ರದ ಮುಹೂರ್ತ ಶುಕ್ರವಾರ ನೆರವೇರಿತು.
ಡಿಸೆಂಬರ್ 2ರಂದು ಚಿತ್ರದುರ್ಗದಲ್ಲಿ ಈ ಸಿನಿಮಾದ ಸ್ಕ್ರಿಪ್ಟ್ ಪೂಜೆ ನೆರವೇರಿತ್ತು. ಈ ಮೊದಲು ಚಿತ್ರಕ್ಕೆ ‘ಗಂಡುಗಲಿ ಮದಕರಿನಾಯಕ’ ಎಂದು ಹೆಸರಿಡಲಾಗಿತ್ತು. ಆದರೆ ಅಂತಿಮವಾಗಿ ‘ರಾಜವೀರ ಮದಕರಿನಾಯಕ’ ಎಂದು ಬದಲಾಯಿಸಲಾಗಿದೆ.
‘ಸಿನಿಮಾದಲ್ಲಿ ನಟಿಸುತ್ತಿರುವ ಎಲ್ಲರೂ ಹಿರಿಯ ಕಲಾವಿದರು. ಅವರು ಹೇಳಿದಂತೆ ನಾನು ಕೇಳಬೇಕು. ದೊಡ್ಡ ತಂಡ ಕಟ್ಟಿಕೊಂಡು ಈ ಚಿತ್ರ ನಿರ್ಮಿಸಲಾಗುತ್ತಿದೆ’ ಎಂದು ದರ್ಶನ್ ಖುಷಿ ಹಂಚಿಕೊಂಡರು.
ಬಿ.ಎಲ್. ವೇಣು ಅವರ ಕಾದಂಬರಿ ಆಧಾರಿತ ಕಥೆ ಚಿತ್ರ ಇದು. ಈ ಚಿತ್ರಕ್ಕಾಗಿ ಚಿತ್ರದುರ್ಗದ ಕೋಟೆಯ ಮರುಸೃಷ್ಟಿಗಾಗಿ ದೊಡ್ಡ ಸೆಟ್ ಹಾಕುವ ಸಿದ್ಧತೆಯಲ್ಲಿದೆ ಚಿತ್ರತಂಡ. ಜೊತೆಗೆ, ಹೈದರಾಬಾದ್, ರಾಜಸ್ಥಾನ ಮತ್ತು ಬೆಂಗಳೂರಿನಲ್ಲಿ ಶೂಟಿಂಗ್ ನಡೆಸಲು ಯೋಜಿಸಿದೆ.
Advertisement