ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ 'ರಾಜ ವೀರ ಮದಕರಿ ನಾಯಕ'

ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು ನಿರ್ದೇಶನದ ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ನಟನೆಯ ‘ರಾಜವೀರ ಮದಕರಿನಾಯಕ’ ಚಿತ್ರದ ಮುಹೂರ್ತ ಶುಕ್ರವಾರ ನೆರವೇರಿತು. 
ಸಿನಿಮಾ ಮಹೂರ್ತ
ಸಿನಿಮಾ ಮಹೂರ್ತ
Updated on

ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು ನಿರ್ದೇಶನದ ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ನಟನೆಯ ‘ರಾಜವೀರ ಮದಕರಿನಾಯಕ’ ಚಿತ್ರದ ಮುಹೂರ್ತ ಶುಕ್ರವಾರ ನೆರವೇರಿತು. 

ಡಿಸೆಂಬರ್‌ 2ರಂದು ಚಿತ್ರದುರ್ಗದಲ್ಲಿ ಈ ಸಿನಿಮಾದ ಸ್ಕ್ರಿಪ್ಟ್‌ ಪೂಜೆ ನೆರವೇರಿತ್ತು. ಈ ಮೊದಲು ಚಿತ್ರಕ್ಕೆ ‘ಗಂಡುಗಲಿ ಮದಕರಿನಾಯಕ’ ಎಂದು ಹೆಸರಿಡಲಾಗಿತ್ತು.  ಆದರೆ ಅಂತಿಮವಾಗಿ  ‘ರಾಜವೀರ ಮದಕರಿನಾಯಕ’ ಎಂದು ಬದಲಾಯಿಸಲಾಗಿದೆ.

‘ಸಿನಿಮಾದಲ್ಲಿ ನಟಿಸುತ್ತಿರುವ ಎಲ್ಲರೂ ಹಿರಿಯ ಕಲಾವಿದರು. ಅವರು ಹೇಳಿದಂತೆ ನಾನು ಕೇಳಬೇಕು. ದೊಡ್ಡ ತಂಡ ಕಟ್ಟಿಕೊಂಡು ಈ ಚಿತ್ರ ನಿರ್ಮಿಸಲಾಗುತ್ತಿದೆ’ ಎಂದು ದರ್ಶನ್‌ ಖುಷಿ ಹಂಚಿಕೊಂಡರು.

ಬಿ.ಎಲ್‌. ವೇಣು ಅವರ ಕಾದಂಬರಿ ಆಧಾರಿತ ಕಥೆ ಚಿತ್ರ ಇದು. ಈ ಚಿತ್ರಕ್ಕಾಗಿ ಚಿತ್ರದುರ್ಗದ ಕೋಟೆಯ ಮರುಸೃಷ್ಟಿಗಾಗಿ ದೊಡ್ಡ ಸೆಟ್‌ ಹಾಕುವ ಸಿದ್ಧತೆಯಲ್ಲಿದೆ ಚಿತ್ರತಂಡ. ಜೊತೆಗೆ, ಹೈದರಾಬಾದ್‌, ರಾಜಸ್ಥಾನ ಮತ್ತು ಬೆಂಗಳೂರಿನಲ್ಲಿ ಶೂಟಿಂಗ್‌ ನಡೆಸಲು ಯೋಜಿಸಿದೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com