ಸಿನಿಮಾ ಎಂದಿಗೂ ನಿರ್ದೇಶಕರ ಮಾದ್ಯಮ: ರಿಷಿ 

"ಗುಲ್ಟೂ" ಚಿತ್ರದ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ  ಈ ವಾರ ತೆರೆಗೆ ಬರಲಿರೋ "ಸಾರ್ವಜನಿಕರಿಗೆ ಸುವರ್ಣಾವಕಾಶ" ಚಿತ್ರದ ಸಹ ಕಥೆಗಾರರಾಗಿದ್ದಾರೆ. . ಹರೀಶ್ ಅವರೊಂದಿಗೆ ಅವರು ಬರೆದ ಸ್ಕ್ರಿಪ್ಟ್ ನೈಜ ಘಟನೆ ಆಧಾರಿತವಾಗಿದೆ. ಆದರೆ ಅದನ್ನು ಸಿನಿಮೀಯ ಶೈಲಿಯಲ್ಲಿ ಕಾಲ್ಪನಿಕ ಕಥೆಯೊಡನೆ ಹೆಣೆಯಲಾಗಿದೆ.
ರಿಷಿ
ರಿಷಿ

ಗುಲ್ಟೂ" ಚಿತ್ರದ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ  ಈ ವಾರ ತೆರೆಗೆ ಬರಲಿರೋ "ಸಾರ್ವಜನಿಕರಿಗೆ ಸುವರ್ಣಾವಕಾಶ" ಚಿತ್ರದ ಸಹ ಕಥೆಗಾರರಾಗಿದ್ದಾರೆ. . ಹರೀಶ್ ಅವರೊಂದಿಗೆ ಅವರು ಬರೆದ ಸ್ಕ್ರಿಪ್ಟ್ ನೈಜ ಘಟನೆ ಆಧಾರಿತವಾಗಿದೆ. ಆದರೆ ಅದನ್ನು ಸಿನಿಮೀಯ ಶೈಲಿಯಲ್ಲಿ ಕಾಲ್ಪನಿಕ ಕಥೆಯೊಡನೆ ಹೆಣೆಯಲಾಗಿದೆ.

“ಇದು ನನ್ನ ಸ್ನೇಹಿತ  ಪ್ರಶಾಂತ್ ರೆಡ್ಡಿ ಅವರ ಜೀವನದಲ್ಲಿ ನಡೆದ ಒಂದು ಘಟನೆಗೆ ಸಂಬಂಧಿಸಿದೆ. ಅವರು ಯಾದೃಚ್ಚಿಕ ಸಂಭಾಷಣೆಗಳ ನಡುವೆ ಇದನ್ನು ನನಗೆ ಹೇಳಿದಾಗ ನಾನು ಇದನ್ನೇ ಇಟ್ಟು ಒಂದು ಸಿನಿಮಾ ಮಾಡಬಹುದೆಂದು ಭಾವಿಸಿದೆ."
ಜನಾರ್ಧನ್ ಹೇಳುತ್ತಾರೆ.

ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ನಟ ಅನೂಪ್ ರಾಮಸ್ವಾಮಿ ಸಹ ಗುಲ್ಟೂ ಚಿತ್ರದೊಡನೆ ಸಂಬಂಧ ಹೊಂದಿದ್ದರು. ಈ ಹಿಂದೆ ನಿರ್ದೇಶಕ ಸುನಿ ಅವರೊಂದಿಗೆ ಕೆಲಸ ಮಾಡಿದ್ದ ಅನುಭವವಿದೆ. ನಟ ರಿಷಿ ಹೇಳುವಂತೆ "ಸಾರ್ವಜನಿಕರಿಗೆ ಸುವರ್ಣಾವಕಾಶ" ಚಿತ್ರದಲ್ಲಿ ಅವರ ವೇದಾಂತ್ ಪಾತ್ರವು ಈ ಹಿಂದಿನ ಅವರ ಚಿತ್ರಗಳಾದ ಆಪರೇಷನ್ ಅಲಮೇಲಮ್ಮ ಹಾಗೂ ಕವಲುದಾರಿನಲ್ಲಿನ ಪಾತ್ರಗಳ ನಡುವಿನಲ್ಲಿ ಬರಲಿದೆ.

“ವೇದಾಂತ್ ಪಾತ್ರವು ಬಹಳ ಸೂಕ್ಷ್ಮವಾಗಿ ಚಿತ್ರೀಕರಣಗೊಂಡಿದೆ.  ಇಲ್ಲಿ, ಚಿತ್ರವು ನಿರ್ದಿಷ್ಟ ನಟನನ್ನು ಹೈಲೈಟ್ ಮಾಡುವುದಿಲ್ಲ. ಸಮಗ್ರ ಪಾತ್ರಧಾರಿಗಳು ನಿರ್ವಹಿಸುವ ಎಲ್ಲಾ ಪಾತ್ರಗಳು ಆಸಕ್ತಿದಾಯಕವಾಗಿರುತ್ತದೆ. " ಅವರು ಹೇಳಿದ್ದಾರೆ.

ಕಥೆ ಮತ್ತು ಪಾತ್ರದ  ದೃಷ್ಟಿಯಿಂದ ನನ್ನ ಎರಡು ಚಿತ್ರಗಳ ನಡುವೆ ಯಾವುದೇ ಹೋಲಿಕೆ ಇಲ್ಲ. ಪ್ರೇಕ್ಷಕರು ಹೊಸ ಚಿತ್ರವನ್ನು ಹುಡುಕುತ್ತಿದ್ದರೆ, ಸರ್ವಜನಿಕರಿಗೆ ಸುವರ್ಣಾವಕಾಶ ಅವರಿಗೆ ಸರಿಹೋಗಲಿದೆ. ಇದು ಸಂಪೂರ್ಣ ಮನರಂಜನೆಯಾಗಿದೆ, ”ಹಾಸ್ಯದ ತಿರುಳು ಕಥಾವಸ್ತುವಿನಲ್ಲಿ ಹುದುಗಿದೆ, ಮತ್ತು ಕಥೆ ಮುಂದುವರೆದಂತೆ ಹಾಸ್ಯ ತೆರೆದುಕೊಳ್ಳುತ್ತದೆ. ಸಿನೆಮಾ ಯಾವಾಗಲೂ ನಿರ್ದೇಶಕರ ಇಷ್ಟದಂತಿರಬೇಕು ಎಂದೆನ್ನುವ ನಟ ಸರಳ ಕಥೆಯೊಂದರ ಹಿಂದೆ, ಮುಂದೆ ಚಿತ್ರಕಥೆಯನ್ನು ಬೆಸೆದಿರುವುದು ಈ ಚಿತ್ರದ ಹೈಲೈಟ್ ಎನ್ನುತ್ತಾರೆ.  “ನಾನು ಚಿತ್ರವನ್ನು ನೋಡಿದ್ದೇನೆ ಮತ್ತು ಅದು ಹೊಸ ಯುಗದ ಸಿನೆಮಾ ಆಗಿ ನನಗೆಜ್ಕಂಡಿದೆ. ಚಿತ್ರದ ನಿರ್ದೇಶಕ, ಬರಹಗಾರ ಮತ್ತು ಸಂಕಲನಕಾರರಿಗೆ ಚಿತ್ರದ ಕ್ರೆಡಿಟ್ ಸಲ್ಲಿಕೆಯಾಗಬೇಕು. ಎನ್ನುವ ನಟ ಚಿತ್ರವು ಕೆಲ ಮಹತ್ವದ ಸಂದೇಶವನ್ನು ಒಳಗೊಂಡಿದ್ದು ಅದನ್ನು ಮನರಂಜನೆಯ ರೀತಿಯಲ್ಲಿ ನಿರೂಪಿಸಲಾಗಿದೆ ಎನ್ನುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com