ಭರತ-ಬಾಹುಬಲಿಯಲ್ಲಿ ಮಂಜು ಮಾಂಡವ್ಯ ರಂಗು ರಂಗಿನ ಸಾಂಗು

ಮಂಜು ಮಾಂಡವ್ಯ ಮತ್ತು ಚಿಕ್ಕಣ್ಣ ಕಾಂಬಿನೇಷನ್​ನಲ್ಲಿ ‘ಶ್ರೀ ಭರತ ಬಾಹುಬಲಿ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಮಂಜು ಮಾಂಡವ್ಯಹಾಡೊಂದಕ್ಕೆ ಹಿನ್ನೆಲೆ ಗಾಯನ ನೀಡಿದ್ದಾರೆ. 
ಭರತ-ಬಾಹುಬಲಿ
ಭರತ-ಬಾಹುಬಲಿ

ಮಂಜು ಮಾಂಡವ್ಯ ಮತ್ತು ಚಿಕ್ಕಣ್ಣ ಕಾಂಬಿನೇಷನ್​ನಲ್ಲಿ ‘ಶ್ರೀ ಭರತ ಬಾಹುಬಲಿ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವ ಮಂಜು ಮಾಂಡವ್ಯಹಾಡೊಂದಕ್ಕೆ ಹಿನ್ನೆಲೆ ಗಾಯನ ನೀಡಿದ್ದಾರೆ. 

ಈ ಹಾಡಿನಲ್ಲಿ ನಟಿ ಶ್ರುತಿ ಪ್ರಕಾಶ್ ಹೆಜ್ಜೆ ಹಾಕಿದ್ದಾರೆ. ಅವರಿಗೆ ಮಂಜು ಮಾಂಡವ್ಯ ಮತ್ತು ಚಿಕ್ಕಣ್ಣ ಸಾಥ್ ನೀಡಿದ್ದಾರೆ.

ಈ ಚಿತ್ರದ ನಿರ್ದೇಶಕ, ನಿರ್ಮಾಪಕರೂ ಇವರೇ ಆಗಿರುವುದರಿಂದ ಅಷ್ಟೇ ಕಾಳಜಿಯಿಂದಲೇ ಸಿನಿಮಾ ಮಾಡಿ ಮುಗಿಸಿ ಈಗ ಹಾಡಿನ ಮೂಲಕ ಆಗಮಿಸಿದ್ದಾರೆ. 

ಈ ಗೀತೆಗೆ ಮಂಜು ಮಾಂಡವ್ಯ ಸಾಹಿತ್ಯ ಬರೆದಿರುವ ಜೊತೆಗೆ ಗಾಯಕಿ ಮೈತ್ರಿ ಅಯ್ಯರ್ ಜತೆಗೆ ಗಾಯಕನಾಗಿಯೂ ಮಂಜು ಧ್ವನಿ ನೀಡಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದು, ’ಕೆಜಿಎಫ್’ ಸಿನಿಮಾಕ್ಕೆ ಕಲಾ ನಿರ್ದೇಶನ ಮಾಡಿದ್ದ ಶಿವಕುಮಾರ್ ‘ಭರತ ಬಾಹುಬಲಿ’ ಚಿತ್ರದ ಗೀತೆಗೆ ಕಲರ್​ಫುಲ್ ಸೆಟ್ ನಿರ್ವಿುಸಿದ್ದಾರೆ. 

ಒಟ್ಟು ಐದು ದಿನಗಳ ಕಾಲ ಈ ಹಾಡನ್ನು ಚಿತ್ರೀಕರಿಸಲಾಗಿದ್ದು, ಪರವೀಶ್ ಕೆ ಛಾಯಾಗ್ರಹಣ ನಿಭಾಯಿಸಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಸಾರಾ ಹರೀಶ್ ಮಂಜುಗೆ ಜೋಡಿಯಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com