ಫೆ.21ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ನಂತರ, ನಗರದ ಒರಾಯನ್ ಮಾಲ್ ನಲ್ಲಿ ಫೆ.28ರವರೆಗೆ ವಿವಿಧ ದೇಶಗಳ ಸುಮಾರು 200 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಇದರಲ್ಲಿ ಆಸ್ಕರ್ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳಿಗೆ ಭಾಜನವಾಗಿರುವ ಅಪರೂಪದ ಚಿತ್ರಗಳಿಗೆ ಅವಕಾಶ ಕಲ್ಪಿಸಲಾಗಿದೆ. 'ತೆರೆಮರೆಯ ಹೀರೋಗಳು' ವಿಭಾಗದಡಿ ಈಶಾನ್ಯ ಭಾರತ, ಲಕ್ಷದ್ವೀಪ ಹಾಗೂ ವಿಶ್ವದ ಇತರ ಭಾಗಗಳ ಚಿತ್ರಗಳು ಆಯ್ಕೆಯಾಗಿವೆ. ತೀರ್ಪುಗಾರರ ಸಮಿತಿಯಲ್ಲಿ ನೆದರ್ ಲೆಂಡ್, ಟರ್ಕಿ, ಇಸ್ರೇಲ್ ಹಾಗೂ ಯೂರೋಪ್ ನ ತಜ್ಞ ಚಿತ್ರ ನಿರ್ಮಾಪಕರು, ನಿರ್ದೇಶಕರಿರಲಿದ್ದಾರೆ ಎಂದರು. ಚಿತ್ರೋತ್ಸವದ ಏಳು ದಿನಗಳು ಕೂಡ ಚಿತ್ರಕತೆ ಬರವಣಿಗೆ, ಛಾಯಾಗ್ರಹಣ, ನೃತ್ಯ, ಸೌಂಡ್ ಇಂಜಿನಿಯರಿಂಗ್, ಚಿತ್ರಗಳ ಮಾರಾಟ ಮತ್ತಿತರರ ಅಂಶಗಳ ಕುರಿತು ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಕನ್ನಡ ಚಿತ್ರೋದ್ಯಮಕ್ಕೆ ವಿಶೇಷವಾಗಿ ಚಿತ್ರ ನಿರ್ಮಾಣ ಹಾಗೂ ಸಹನಿರ್ಮಾಣದ ಕುರಿತು ತರಬೇತಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.