ಬೆಂಗಳೂರು: ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ್ದಾರೆಂದು ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ಅಗ್ನಿಸಾಕ್ಷಿ' ಅಖಿಲ್ ವಿರುದ್ಧ ದೂರುದಾಖಲಾಗಿದೆ. ಅಖಿಲ್ ಪಾತ್ರಧಾರಿಯಾಗಿರುವ ರಾಜೇಶ್ ಧ್ರುವ ವಿರುದ್ಧ ದೂರು ದಾಖಲಿಸಲಾಗಿದೆ.
2017ರಲ್ಲಿ ಶ್ರುತಿಯವರನ್ನು ವಿವಾಹವಾಗಿದ್ದ ರಾಜೇಶ್ ಅವರಿಗೆ ವರದಕ್ಷಿಣೆ ತರುವಂತೆ ಪೀಡಿಸಿದ್ದಾರೆ.ಅಲ್ಲದೆ ಅವರಿಗೆ ಮಾನಸಿಕ ಹಿಂಸೆ ಕೊಟ್ಟು ಮನೆಯಿಂದ ಹೊರ ಹಾಕಿದ್ದಾರೆ.
ಹಲವು ತಿಂಗಳ ಕಾಲ ಶ್ರುತಿ ಅವರೊಡನೆ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದ ರಾಜೇಶ್ 2017ರಲ್ಲಿ ಅವರನ್ನು ವಿವಾಹವಾಗಿದ್ದರು.ಆ ಬಳಿಕ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರ ಮನೆಯಲ್ಲಿ ಬಾಡಿಗೆಗಿದ್ದ ನಟ "ತನಗೆ ಮದುವೆಯೇ ಆಗಿಲ್ಲ" ಎಂದುಕೊಂಡು ತಿರುಗುತ್ತಿದ್ದರು ಎನ್ನಲಾಗಿದೆ.
ಇದೀಗ ರಾಜೇಶ್ ಪತ್ನಿ ಶ್ರುತಿ ಪತಿ ವಿರುದ್ಧ ಬಸವನಗುಡಿ ಮಹಿಳಾ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೋಲೀಸರು ತನಿಖೆ ಕೈಗೊಂಡಿದ್ದಾರೆ.