ನಟ ಮತ್ತು ನಿರ್ದೇಶನ ಎರಡೂ ಖುಷಿ ಕೊಡುತ್ತಿದೆ: ಎಂಜಿ ಶ್ರೀನಿವಾಸ್

ನಟನಾಗುವ ಹಂಬಲದಿಂದ ಚಿತ್ರರಂಗಕ್ಕೆ ಬಂದವರು ಎಂ ಜಿ ಶ್ರೀನಿವಾಸ್. ಡ್ಯಾನ್ಸ್ ಕೊರಿಯೊಗ್ರಫರ್ ಆಗಿ ವೃತ್ತಿ...
ಎಂ ಜಿ ಶ್ರೀನಿವಾಸ್
ಎಂ ಜಿ ಶ್ರೀನಿವಾಸ್
Updated on

ನಟನಾಗುವ ಹಂಬಲದಿಂದ ಚಿತ್ರರಂಗಕ್ಕೆ ಬಂದವರು ಎಂ ಜಿ ಶ್ರೀನಿವಾಸ್. ಡ್ಯಾನ್ಸ್ ಕೊರಿಯೊಗ್ರಫರ್ ಆಗಿ ವೃತ್ತಿ ಆರಂಭಿಸಿದ ಶ್ರೀನಿವಾಸ್ ನಂತರ ಆರ್ ಜೆಯಾದರು. ಕ್ಯಾಮರಾ ಮುಂದೆ ನಿಲ್ಲಲು ಅವಕಾಶಕ್ಕಾಗಿ ಕಾಯುತ್ತಿದ್ದಾಗ ನಟ ಉಪೇಂದ್ರ ಅವರ ಟೋಪಿವಾಲಾದಲ್ಲಿ ಅವಕಾಶ ಸಿಕ್ಕಿತು. ಉಪೇಂದ್ರ ಅವರ ಉತ್ತೇಜನದಿಂದ ನಿರ್ದೇಶನಕ್ಕೆ ಬಂದೆ ಎನ್ನುತ್ತಾರೆ ಶ್ರೀನಿವಾಸ್.

5 ವರ್ಷಗಳ ನಂತರ ಶ್ರೀನಿವಾಸ ಕಲ್ಯಾಣ ಚಿತ್ರ ನಿರ್ದೇಶಿಸಿದರು,ನಂತರ ಇದೀಗ ಬೀರಬಲ್ ಚಿತ್ರ ನಿರ್ದೇಶಿಸುತ್ತಿದ್ದಾರೆ. ಶ್ರೀನಿವಾಸ ಕಲ್ಯಾಣ ನಂತರ ಎರಡು-ಮೂರು ರೊಮ್ಯಾಂಟಿಕ್ ಚಿತ್ರಗಳ ನಿರ್ದೇಶನಕ್ಕೆ ಅವಕಾಶ ಬಂದವು, ಆದರೆ ನನಗೆ ಇಷ್ಟವಾಗಲ್ಲ. ಪ್ರಯೋಗಾತ್ಮಕ ಚಿತ್ರವನ್ನು ಮಾಡಲು ಇಷ್ಟಪಟ್ಟು ಕ್ರೈಮ್ ಥ್ರಿಲ್ಲರ್ ವಿಷಯ ಒಪ್ಪಿಕೊಂಡೆ ಎಂದರು.

ರಂಗಭೂಮಿ, ನೃತ್ಯದ ಹಿನ್ನಲೆ ಹೊಂದಿರುವ ರುಕ್ಮಿಣಿ ವಸಂತ್ ನಾಯಕಿಯಾಗಿ ಅಭಿನಯಿಸುತ್ತಿದ್ದು ಸಂಗೀತ ನಿರ್ದೇಶಕರಾಗಿ ಸೌರಭ್ ವೈಭವ್ ಚೊಚ್ಚಲ ಸಂಗೀತ ನಿರ್ದೇಶಕರಾಗಿ ಗಾಂಧಿನಗರಕ್ಕೆ ಕಾಲಿಡುತ್ತಿದ್ದಾರೆ. ಭರತ್ ಪರಶುರಾಮ್ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com