ಆರೋಗ್ಯ ಚೇತರಿಕೆ, ಮಾ.5ರಿಂದ 'ದಮಯಂತಿ' ಸೆಟ್ ಗೆ ರಾಧಿಕಾ ಪುನರಾಗಮನ

ಶಾಂತಿನಗರ ಸ್ಮಶಾನದಲ್ಲಿ "ಭೈರಾದೇವಿ" ಶೂಟಿಂಗ್ ವೇಳೆ ಗಾಯಗೊಂಡಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಇದೀಗ ಚೇತರಿಸಿಕೊಂಡಿದ್ದು ಮಾರ್ಚ್ 5ರಿಂದ "ದಮಯಂತಿ" ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.
ರಾಧಿಕಾ ಕುಮಾರಸ್ವಾಮಿ
ರಾಧಿಕಾ ಕುಮಾರಸ್ವಾಮಿ
ಬೆಂಗಳೂರು: ಶಾಂತಿನಗರ ಸ್ಮಶಾನದಲ್ಲಿ "ಭೈರಾದೇವಿ" ಶೂಟಿಂಗ್ ವೇಳೆ ಗಾಯಗೊಂಡಿದ್ದ ನಟಿ ರಾಧಿಕಾ ಕುಮಾರಸ್ವಾಮಿ ಇದೀಗ ಚೇತರಿಸಿಕೊಂಡಿದ್ದು ಮಾರ್ಚ್ 5ರಿಂದ "ದಮಯಂತಿ" ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.
ಕೆಲ ದಿನಗಳ ಕಾಲ ವಿಶ್ರಾಂತಿಯ ಬಳಿಕ ನಟಿ ಮತ್ತೆ ಎರಡು ಚಿತ್ರಗಳ ಶೂಟಿಂಗ್ ಗಳಲ್ಲಿ ತೊಡಗಿಸಿಕೊಳ್ಲಲು ಬಯಸಿದ್ದಾರೆ. "ನನ್ನ ಆರೋಗ್ಯ ಈಗ ಉತ್ತಮವಾಗಿದೆ. ಇದೀಗ ನಾನು ದಮಯಂತಿ ಚಿತ್ರದ ವಾರದ ಕಾಲದ ಶುಟಿಂಗ್ ನಲ್ಲಿ ತೊಡಗಿಸಿಕೊಳ್ಲಲು ನಿರ್ಧರಿಸಿದ್ದೇನೆ.ಇದೇ ವೇಳೆ ಭೈರಾದೇವಿಯಲ್ಲಿ ನನಗೆ ಮೂರು ದಿನಗಳ ಕೆಲಸ ಹಾಗೂ ಎರಡು ಹಾಡುಗಳ ಚಿತ್ರೀಕರಣಬಾಕಿ ಇದೆ.ಇದನ್ನು ನಾನು ಮಾರ್ಚ್ 17ರ ನಂತರ ಪೂರ್ಣಗೊಳಿಸುತ್ತೇನೆ" ರಾಧಿಕಾ ಹೇಳಿದ್ದಾರೆ.
ರಾಧಿಕಾ ಅವರ ಸ್ವಂತ ನಿರ್ಮಾಣದಲ್ಲಿ ಮೂಡಿಬರುತ್ತಿರುವ "ಭೈರಾದೇವಿ" ಚಿತ್ರಕ್ಕೆ ಶ್ರೀಜೈ ಆಕ್ಷನ್ ಕಟ್ ಹೇಳಿದ್ದಾರೆ. ಇದು ಥ್ರಿಲ್ಲರ್ ಕಥಾನಕವಾಗಿದು ಅನುಭವಿ ನಟ ರಮೇಶ್ ಅರವಿಂದ್ ಈ ಚಿತ್ರದಲ್ಲಿ ಪೋಲೀಸ್ ಅಧಿಕಾರಿಯ ಪಾತ್ರ ಮಾಡಲಿದ್ದಾರೆ.
ಇನ್ನು ನವರಸನ್ ನಿರ್ದೇಶನದ "ದಮಯಂತಿ" ಎಂಬತ್ತರ ದಶಕದ ಕಥಾನಕವಾಗಿದ್ದು ಇದರಲ್ಲಿ ಸಹ ರಾಧಿಕಾ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com