ಸಾರಥಿಯಂತ ಹಿಟ್ ಸಿನಿಮಾ ನೀಡಿದ ದಿನಕರ್ ತೂಗುದೀಪ್ ಕಳೆದ ವರ್ಷ ಲೈಫ್ ಜೊತೆ ಒಂದು ಸೆಲ್ಫಿ ಎಂಬ ಸ್ನೇಹಕತೆ ಆಧರಿಸಿ ಸಿನಿಮಾ ಮಾಡಿದ್ದರು, ಈಗ ಮತ್ತೆ ಕಮರ್ಷಿಯಲ್ ಸಿನಿಮಾ ತಯಾರಿಸಲು ಮುಂದಾಗಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ವೃತ್ತಿ ಜೀವನದಲ್ಲಿ ಹೊಸ ಮೈಲಿಗಲ್ಲಿಗೆ ಕಾರಣವಾದ ಸಾರಥಿಯಂತಹ ಮತ್ತೊಂದು ಸಿನಿಮಾಗಾಗಿ ದಿನಕರ್ ಕಥೆ ಬರೆಯುತ್ತಿದ್ದಾರೆ. ಮುಂದಿನ ಮೂರು ಅಥವಾ ನಾಲ್ಕು ತಿಂಗಳಲ್ಲಿ ಕಥೆ ಪೂರ್ಣವಾಗಲಿದ.
ಈ ಕಥೆಯಲ್ಲಿ ಪ್ರೀತಿ, ಆಕ್ಷನ್, ಸೆಂಟಿಮೆಂಟ್ ಇದೆ ಎಂದು ದಿನಕರ್ ಹೇಳಿದ್ದಾರೆ, ಆ್ಯಕ್ಷನ್ ಸಿನಿಮಾಗಳಿಗೆ ಕಥೆ ಬರೆಯಲು ಸಮಯ ಹಿಡಿಯುತ್ತದೆ ಎಂದು ಹೇಳಿದ್ದಾರೆ,
ಚಿತ್ರಕಥೆ ಸಂಪೂರ್ಣವಾದ ನಂತರ ಸಿನಿಮಾಗೆ ನಾಯಕ ಯಾರು ಎಂಬ ಬಗ್ಗೆ ನಿರ್ಧರಿಸುವುದಾಗಿ ದಿನಕರ್ ಹೇಳಿದ್ದಾರೆ.