2009ರಲ್ಲಿ ನನ್ನ ಬಳಿ ಹಿಂದಿಯ ರಂಗ್ ದೆ ಬಸಂತಿಯಂತ ಕಥೆ ಇತ್ತು. ಆದರೆ ಬಜೆಟ್ ಕೊರತೆಯಿಂದ ಅದು ಮುಂದಕ್ಕೆ ಹೋಗಲಿಲ್ಲ. ಹೊಸಬರು ಕಮರ್ಷಿಯಲ್ ಚಿತ್ರಕ್ಕೆ ಬಂಡವಾಳ ಹಾಕಲು ಮುಂದೆ ಬರುವುದು ಕಡಿಮೆ. ಹಾಗಾಗಿ ನಾನು ಹರಿವು ಚಿತ್ರವನ್ನು ಕೈಗೆತ್ತಿಕೊಂಡೆ. ಇದೀಗ ಕಮರ್ಷಿಯಲ್ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದೇನೆ. ದಯಾನಂದ್ ಮತ್ತು ನಾನು ದೀರ್ಘ ಕಾಲದ ಸ್ನೇಹಿತರು. ವೀರು ಮಲ್ಲಣ್ಣ ನಿರ್ಮಾಣದ ಹೊಣೆ ಹೊತ್ತುಕೊಳ್ಳಲಿದ್ದಾರೆ ಎಂದು ಮನ್ಸೊರೆ ಹೇಳಿದರು.