ಯೋಗರಾಜ್ ಭಟ್ ಅವರಂಥ ನಿರ್ದೇಶಕರ ಬಳಿ ಕೆಲಸ ಮಾಡುವುದು ಸುದೈವ; ಸೋನಾಲ್ ಮಾಂಟೇರಿಯಾ

ಪಂಚತಂತ್ರ ಸಿನಿಮಾ ತಮ್ಮ ವೃತ್ತಿಬದುಕಿನಲ್ಲಿ ಮಹತ್ವದ ತಿರುವು ನೀಡಲಿದೆ ಎಂದು ನಾಯಕಿ ಸೊನಾಲ್ ಮಾಂಟೆರೋ...
ಸೋನಾಲ್ ಮಾಂಟೇರಿಯಾ
ಸೋನಾಲ್ ಮಾಂಟೇರಿಯಾ
ಪಂಚತಂತ್ರ ಸಿನಿಮಾ ತಮ್ಮ ವೃತ್ತಿಬದುಕಿನಲ್ಲಿ ಮಹತ್ವದ ತಿರುವು ನೀಡಲಿದೆ ಎಂದು ನಾಯಕಿ ಸೋನಾಲ್ ಮಾಂಟೇರಿಯಾ ಹೇಳಿದ್ದಾರೆ.
ಪ್ರತಿಯೊಬ್ಬರ ವೃತ್ತಿಬದುಕಿನಲ್ಲಿಯೂ ಇಂತಹ ಸಮಯಕ್ಕಾಗಿ ಕಾಯುತ್ತೇವೆ. ಚಿತ್ರ ಬಿಡುಗಡೆಗೆ ಮುನ್ನ ವಿಶ್ವಾಸದಿಂದ ಹೇಳುತ್ತೇನೆ, ಯೋಗರಾಜ್ ಭಟ್ ಅವರ ಈ ಚಿತ್ರ ನನಗೆ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ. ಶೃಂಗಾರದ ಹೊಂಗೆಮರ ಗೀತೆಯಂತೂ ಅದ್ಭುತವಾಗಿ ಮೂಡಿಬಂದಿದ್ದು ಅದು ಕೂಡ ನಮಗೆ ಧನಾತ್ಮಕ ಅಂಶವಾಗಿದೆ ಎನ್ನುತ್ತಾರೆ ಈ ಮಂಗಳೂರು ಚೆಲುವೆ,
ಸೋನಾಲ್ ಮಾಂಟೇರಿಯಾ ತುಳು ಭಾಷೆಯ ಚಿತ್ರಗಳಿಂದ ತಮ್ಮ ವೃತ್ತಿಬದುಕು ಆರಂಭಿಸಿ ಈ ಹಿಂದೆ ಕನ್ನಡದ ಕೆಲವೊಂದು ಸಣ್ಣ ಚಿತ್ರಗಳಲ್ಲಿ ಅಭಿನಯಿಸಿದ್ದರು. ಆದರೆ ಪ್ರೇಕ್ಷಕರಿಗೆ ಹತ್ತಿರವಾದದ್ದು ಇದೀಗ ಪಂಚತಂತ್ರ ಮೂಲಕ.
ಸೋನಾಲ್ ಗೆ ಯೋಗರಾಜ್ ಭಟ್ ರ ಗಾಳಿಪಟ-2 ಚಿತ್ರದಲ್ಲಿ ನಾಯಕಿಯಾಗುವ ಅವಕಾಶ ಕೂಡ ಸಿಕ್ಕಿದೆ. ಅವರ ಬಳಿ ತುಂಬಾ ಕಲಿತಿದ್ದೇನೆ, ಸಂಭಾಷಣೆ ಹೇಳುವ ರೀತಿ, ದೈಹಿಕ ಭಾಷೆ ಇತ್ಯಾದಿ ಭಟ್ಟರ ಚಿತ್ರದಲ್ಲಿ ಅಭಿನಯಿಸಿದರೆ ವೃತ್ತಿಯಲ್ಲಿ ಬಹಳ ಉಪಯೋಗವಾಗಲಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com