'ಪಂಚತಂತ್ರ' ನನ್ನ ಸಿನಿಮಾ ಬದುಕಿನಲ್ಲಿ ಅತ್ಯಂತ ದೊಡ್ಡದು: ವಿಹಾನ್

ಕನ್ನಡ ಚಿತ್ರ ನಿರ್ದೇಶಕ ಯೋಗರಾಜ್ ಭಟ್ ಅವರ ಬಳಿ ಕೆಲಸ ಮಾಡುವುದೆಂದರೆ ಹೊಸಬರಿಗೆ ಎಲ್ಲಿಲ್ಲದ ಖುಷಿ...
ವಿಹಾನ್
ವಿಹಾನ್
Updated on
ಕನ್ನಡ ಚಿತ್ರ ನಿರ್ದೇಶಕ ಯೋಗರಾಜ್ ಭಟ್ ಅವರ ಬಳಿ ಕೆಲಸ ಮಾಡುವುದೆಂದರೆ ಹೊಸಬರಿಗೆ ಎಲ್ಲಿಲ್ಲದ ಖುಷಿ. ಅಂತವರಲ್ಲೊಬ್ಬ ಪಂಚತಂತ್ರ ಚಿತ್ರದ ನಾಯಕನಟ ವಿಹಾನ್. ಈ ಚಿತ್ರ ನನ್ನ ಚಿತ್ರಜೀವನದಲ್ಲಿ ಅತಿ ದೊಡ್ಡದು ಎಂಬುದು ವಿಹಾನ್ ಮಾತು.
ಕಾಲ್ ಕೆಜಿ ಪ್ರೀತಿ ಚಿತ್ರದಿಂದ ಸಿನಿಮಾಕ್ಕೆ ಕಾಲಿಟ್ಟ ವಿಹಾನ್ ಗೆ ಇದು ಎರಡನೇ ಚಿತ್ರ. ಇಲ್ಲಿ ರೊಮ್ಯಾನ್ಸ್, ಫೈಟಿಂಗ್, ಡ್ಯಾನ್ಸ್ ಮತ್ತು ಸ್ಟಂಟ್ ಎಲ್ಲವೂ ಇದೆ. ಹೀಗಾಗಿ ಪಂಚತಂತ್ರ ದೊಡ್ಡ ಸಿನಿಮಾ ಎಂದು ಅಂದುಕೊಳ್ಳುತ್ತೇನೆ.
ಚಿತ್ರದ ಬಗ್ಗೆ ವಿಹಾನ್ ಹೇಳಿದ್ದಿಷ್ಟು: ನಾನು ಕಾಲೇಜಿನಲ್ಲಿ ಓದುತ್ತಿದ್ದಾಗ ಕಾರು ರೇಸಿಂಗ್ ಮಾಡಿದ್ದೆ. ಅದು ಚಿತ್ರದಲ್ಲಿ ಸಹಾಯವಾಯಿತು. ಸ್ಕ್ರೀನ್ ಮೇಲೆ ತೋರಿಸಲು ಕಾರು ರೇಸಿಂಗ್ ನಲ್ಲಿ ಪಕ್ವತೆ ಬರಬೇಕಾಗಿತ್ತು. ರೇಸರ್ ಗಳಾದ ಮೋನಿಶಾ ಮತ್ತು ಚಂದನ್ ಸಹಾಯ ಮಾಡಿದರು. ಸಮಕಾಲೀನ ಶೈಲಿಯ ಡ್ಯಾನ್ಸ್ ನನಗೆ ಹೊಸದಾಗಿತ್ತು. ಚಿತ್ರಕ್ಕಾಗಿ ಹೊಸತು ಕಲಿಯಬೇಕಾಗಿತ್ತು. ಅದಕ್ಕೆ ಇಮ್ರಾನ್ ಸರ್ದಾರಿಯಾ ಸಹಾಯ ಮಾಡಿದರು.
ಯೋಗರಾಜ್ ಭಟ್ ಸರ್ ಅವರ ಬಳಿ ಸೇರಿಕೊಂಡ ಮೇಲೆ ತುಂಬಾ ಕಲಿತೆ. ನಟರಲ್ಲಿರುವ ಪ್ರತಿಭೆಯನ್ನು ಅವರು ಹೊರತೆಗೆಯುತ್ತಾರೆ. ಈ ಚಿತ್ರದ ಮೂಲಕ ಅಂತರ್ಮುಖಿಯಾಗಿದ್ದ ನಾನು ಬಹಿರ್ಮುಖಿ ಕೂಡ ಆದೆ. ಚಿತ್ರದಲ್ಲಿ ರಂಗಾಯಣ ರಘು ಅಂತವರ ಜೊತೆ ಫೈಟಿಂಗ್ ಮಾಡಬೇಕಾಗಿತ್ತು. ಆದರೆ ಅವರ ಪ್ರೋತ್ಸಾಹದಿಂದ ಅದು ಸಾಧ್ಯವಾಯಿತು. ಪಂಚತಂತ್ರ ಸಿನಿಮಾ ಮೂಲಕ ಸಹಾಯಕ ನಿರ್ದೇಶಕನಾಗಿ ಕೂಡ ಪ್ರಯೋಗ ಮಾಡಿದೆ. ಕ್ಯಾಮರಾ ಮುಂದೆ ಕೆಲಸವಿಲ್ಲದಿದ್ದಾಗ ಸಹಾಯಕನಾಗಿ ಕೆಲಸ ಮಾಡುವಂತೆ ಯೋಗರಾಜ್ ಸರ್ ಹೇಳುತ್ತಿದ್ದರು. ಆಗ ಸಹಾಯಕ ನಿರ್ದೇಶಕನಾಗುವುದು ಕಷ್ಟವೆನಿಸಿತು. ಕೆಲವೇ ಹೊತ್ತುಗಳಲ್ಲಿ ಸುಸ್ತಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com