ಯುವಜನತೆ ಮತ್ತು ಹಿರಿಯರ ನಡುವೆ ತಲೆಮಾರಿನ ಅಂತರದ ಬಗ್ಗೆ ಕೂಡ ಚಿತ್ರದಲ್ಲಿ ಒತ್ತಿ ಹೇಳಲಾಗುತ್ತಿದೆ. ಚಿತ್ರದ ನಾಯಕ ನಾಯಕಿಯರೆಲ್ಲ ಹೊಸಬರೇ. ರಂಗಾಯಣ ರಘುರಂತಹ ಕೆಲ ಹಿರಿಯ ನಟರಿದ್ದಾರೆ. ಹೊಸಬರ ಜೊತೆ ಚಿತ್ರ ಮಾಡುವುದೆಂದರೆ ನನಗೆ ಖುಷಿಯ ವಿಚಾರ,ಪರದೆಯ ಮೇಲೆ ಅವರಲ್ಲಿ ಒಂದು ಹೊಸತನವಿರುತ್ತದೆ. ಹೊಸಬರಲ್ಲಿ ಹೊಸ ಹೊಸ ಆಲೋಚನೆಗಳಿರುತ್ತವೆ. ಹೊಸಬರಿಗೆ ಹೇಳಿಕೊಡುವಾಗ ನಾವು ಕೂಡ ಅನೇಕ ವಿಷಯಗಳನ್ನು ಕಲಿಯುತ್ತೇವೆ. ಅದನ್ನು ಚಿತ್ರದ ಬರವಣಿಗೆಯಲ್ಲಿ ಅಳವಡಿಸಿಕೊಳ್ಳುತ್ತೇವೆ.ಸಾಮಾನ್ಯವಾಗಿ ಎಲ್ಲರೂ ಸ್ಟಾರ್ ಜೊತೆ ಸಿನಿಮಾ ಮಾಡಬೇಕೆಂದುಕೊಳ್ಳುತ್ತಾರೆ. ಆದರೆ ಹೊಸಬರಿಗೆ ಸಹ ಅವಕಾಶ ಕೊಡಬೇಕು. ಅವರನ್ನು ಗುರುತಿಸಿ ಬೆಳೆಸಬೇಕು. ಅಷ್ಟಕ್ಕೂ ನಿನ್ನೆಯ ಹೊಸಬರೇ ಇಂದಿನ ಸ್ಟಾರ್ ಗಳಲ್ಲವೇ, ಸ್ಟಾರ್ ಗಳಿಗೆ ಈಗಾಗಲೇ ಸಾಕಷ್ಟು ಅಭಿಮಾನಿಗಳಿರುವುದರಿಂದ ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡುವುದು ಸ್ವಲ್ಪ ರಿಸ್ಕ್, ಆದರೆ ನಾನದನ್ನು ಸಂತೋಷಪಡುತ್ತೇನೆ ಎಂದರು.