1953ರಲ್ಲಿ ತಂದೆಯನ್ನು ಕಳೆದುಕೊಂಡ ಬಳಿಕ ಅವರ ‘ಮಿತ್ರ ಮಂಡಳಿ’ ನಾಟಕ ಕಂಪನಿಯ ಜವಾಬ್ದಾರಿ ವಹಿಸಿಕೊಂಡು ಮುನ್ನಡೆಸಿದರು. ‘ಮಕ್ಮಲ್ ಟೋಪಿ, ‘ನಡುಬೀದಿ ನಾರಾಯಣ’, ‘ದೇವದಾಸಿ’, ಲಂಚಾವತಾರ, ಪಶ್ಚಾತ್ತಾಪ, ಭ್ರಷ್ಟಾಚಾರ, ಚಪಲಾವತಾರ, ಲಾಟರಿ ಸರ್ಕಾರ, ಸನ್ಯಾಸಿ ಸಂಸಾರ, ಸದಾರಮೆ, ಎಚ್ಚಮ ನಾಯಕ, ಡಬ್ಬಲ್ ತಾಳಿ ಮೊದಲಾದ ನಾಟಕಗಳಿಂದ ಜನಮನ್ನಣೆ ಪಡೆದರು.