ನಟ, ನಿರ್ದೇಶಕ, ಟಿವಿ ಕಾರ್ಯಕ್ರಮ ನಿರೂಪಕ ಈಗೆ ನಾನಾ ಬಗೆಯಲ್ಲಿ ಪಾತ್ರವಹಿಸುವ ರಮೇಶ್ ಅರವಿಂದ್ ಕನ್ನಡದ ನಾಡಿನ ಬಹುಮುಖ ಪ್ರತಿಭೆ ಎಂದರೆ ತಪ್ಪಲ್ಲ. ಅವರೇನೇ ಮಾಡಿದರೂ ಅತ್ಯುತ್ತಮವಾದದ್ದನ್ನೇ ಮಾಡುತ್ತಾರೆ ಎನ್ನುವುದು ಅವರ ಚಿತ್ರಗಳನ್ನು ನೋಡಿದ ಪ್ರೇಕ್ಷಕರಿಗೆ ಮನದಟ್ಟಾಗಿದೆ. ಅವರು ತಾವು ಕೆಲಸ ಮಾಡುವ ಪ್ರತಿ ನಿಮಿಷವನ್ನೂ ಅಮೂಲ್ಯವೆಂದು ಭಾವಿಸಿದ್ದಾರೆ. ಇದೀಗ ಅವರು ನಡೆಸಿಕೊಡುತ್ತಿರುವ "ವೀಕೆಂಡ್ ವಿತ್ ರಮೇಶ್ ಸೀಜನ್ 4" ಮತ್ತು ಈ ಹಿಂದಿನ "ಕನ್ನಡದ ಕೋಟ್ಯಾಧಿಪತಿ" ಸೀಜನ್ ಗಳಿಂಡ ಕಿರುತೆರೆಯಲ್ಲಿಯೂ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ.