ಯೋಗರಾಜ್ ಭಟ್ಟರ ಹೊಸ ಸಿನೆಮಾ 'ಪದವಿಪೂರ್ವ’

ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರು ಹೊಸ ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದು,  ಯೋಗರಾಜ್ ಸಿನಿಮಾಸ್ ಅಡಿಯಲ್ಲಿ ಮುಂದಿನ ವರ್ಷ ಜನವರಿ ೨೦೨೦ಕ್ಕೆ ಚಿತ್ರ ಆರಂಭವಾಗಲಿದೆ.
ಯೋಗರಾಜ್ ಭಟ್ ಹಾಗೂ ತಂಡ
ಯೋಗರಾಜ್ ಭಟ್ ಹಾಗೂ ತಂಡ
Updated on

ಬೆಂಗಳೂರು: ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರು ಹೊಸ ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದು,  ಯೋಗರಾಜ್ ಸಿನಿಮಾಸ್ ಅಡಿಯಲ್ಲಿ ಮುಂದಿನ ವರ್ಷ ಜನವರಿ ೨೦೨೦ಕ್ಕೆ ಚಿತ್ರ ಆರಂಭವಾಗಲಿದೆ.

ಈ ಚಿತ್ರಕ್ಕೆ ಯೋಗರಾಜ್ ಭಟ್ ಹಾಗೂ ರವಿ ಶಾಮನೂರ್ ಅವರು ಬಂಡವಾಳ ಹೂಡಲಿದ್ದು, ಹರಿಪ್ರಸಾದ್ ಜಯಣ್ಣ ನಿರ್ದೇಶನದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ರವಿ ಶಾಮನೂರ್ ಅವರ ಪುತ್ರ ಪೃಥ್ವಿ ರಾಜ್ ಶಾಮನೂರು ಅವರು 'ಪದವಿಪೂರ್ವ’ ಚಿತ್ರದ ನಾಯಕವನಾಗಿದ್ದಾರೆ. ಈ ಮೂಲಕ ಮಾಡಲಿಂಗ್ ನಲ್ಲಿ ತೊಡಗಿಸಿಕೊಂಡಿದ್ದ ಪೃಥ್ವಿ ಈಗ ಮೊದಲ ಬಾರಿಗೆ ಹೀರೋ ಆಗುತ್ತಿದ್ದಾರೆ.

ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಮತ್ತು ಸಂತೋಷ್ ರಾಜ್ ಪತಾಜೆ ಛಾಯಾಗ್ರಹಣವಿರಲಿದೆ ಎಂದು ಯೋಗರಾಜ್ ಸಿನೆಮಾಸ್ ತಿಳಿಸಿದೆ.

ಯುವಕ ಯುವತಿಯರ ತಲ್ಲಣವನ್ನು ಇಟ್ಟುಕೊಂಡು ಸಿನಿಮಾದ ಕಥೆ ಮಾಡಲಾಗಿದೆ. ಅದಕ್ಕೆ ತಕ್ಕ ಹಾಗೆ 'ಪದವಿ ಪೂರ್ಣ' ಎಂಬ ಟೈಟಲ್ ನಿಗದಿ ಮಾಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com