ಧನ್ವೀರ್ 'ಬಂಪರ್' ಗೆ ಹರಿ ಸಂತೋಷ್ ಆಕ್ಷನ್ ಕಟ್

ನಟ ಧನ್ವೀರ್ ಅವರ ಎರಡನೇ ಚಿತ್ರ "ಬಂಪರ್" ಗೆ ನಿರ್ದೇಶಕರು ಸಿಕ್ಕಿದ್ದಾರೆ. ಸುಪ್ರಿತ್ ನಿರ್ಮಾಣದ ಈ ಚಿತ್ರವನ್ನು ಹರಿ ಸಂತೋಷ್ ನಿರ್ದೇಶಿಸುವುದು ಪಕ್ಕಾ ಆಗಿದೆ.
ಹರಿ ಸಂತೋಷ್, ಧನ್ವೀರ್, ಸುಪ್ರೀತ್
ಹರಿ ಸಂತೋಷ್, ಧನ್ವೀರ್, ಸುಪ್ರೀತ್
Updated on

ನಟ ಧನ್ವೀರ್ ಅವರ ಎರಡನೇ ಚಿತ್ರ "ಬಂಪರ್" ಗೆ ನಿರ್ದೇಶಕರು ಸಿಕ್ಕಿದ್ದಾರೆ. ಸುಪ್ರಿತ್ ನಿರ್ಮಾಣದ ಈ ಚಿತ್ರವನ್ನು ಹರಿ ಸಂತೋಷ್ ನಿರ್ದೇಶಿಸುವುದು ಪಕ್ಕಾ ಆಗಿದೆ.

ಈ ಚಿತ್ರಕ್ಕೆ  ನಿರ್ದೇಶಕ ಚೇತನ್ ಕುಮಾರ್ ಚಿತ್ರಕಥೆ, ಸಂಭಾಷಣೆ ಬರೆದಿದ್ದರೆ ಅಲೆಮಾರು ಸಂತು ಎಂದು ಖ್ಯಾತವಾಗಿರುವ ಕಡೆಯ ಬಾರಿಗೆ "ಕಾಲೇಜ್ ಕುಮಾರ್" ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಹರಿ ಸಂತೋಷ್ ಈ ಚಿತ್ರದ ನಿರ್ದೇಶಕರಗಿ ಆಯ್ಕೆಯಾಗಿದ್ದಾರೆ.

"ಬಂಪರ್" ಚಿತ್ರವನ್ನು ತಮಿಳು, ತೆಲುಗಿನಲ್ಲಿ ಸಹ ರಿಮೇಕ್ ಮಾಡಲಾಗುತ್ತಿದೆ.ರಾಜವರ್ದನ್ ಅಭಿನಯದ "ಬಿಚ್ಚುಗತ್ತಿ ಚಾಪ್ಟರ್-೧"ಚಿತ್ರದ ಚಿತ್ರೀಕರಣವನ್ನು ನಿರ್ದೇಶಕರು ಪೂರ್ಣಗೊಳಿಸಿದ್ದಾರೆ, ಇದು ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು ನಿರ್ದೇಶಕರು ತಾವೀಗ ಧನ್ವೀರ್ ಚಿತ್ರದ ಉಸ್ತುವಾರಿ ಹೊರಲಿದ್ದಾರೆ.

ಇನ್ನು ಸೆಪ್ಟೆಂಬರ್ 8ಕ್ಕೆ ನಟ ಧನ್ವೀರ್ ಜನ್ಮದಿನವಿದ್ದು ಅಂದು ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಬೀಳಲಿದೆ.ಇನ್ನು ಈ ಚಿತ್ರ ಒಂದು ಫ್ಯಾಮಿಲಿ ಎಂಟರ್ಟೈನರ್ ಎಂದು ಹೇಳಲಾಗುತ್ತಿದೆ. ಸಧ್ಯ ಚಿತ್ರತಂಡ ಉಳಿದ ಪಾತ್ರವರ್ಗಕ್ಕಾಗಿ ನಟ ನಟಿಯರ ಆಯ್ಕೆಯಲ್ಲಿ ತೊಡಗಿಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com