ದುನಿಯಾ ವಿಜಯ್ ಅಭಿನಯದ "ಜಯಮ್ಮನ ಮಗ" ಚಿತ್ರದ ನಿರ್ದೇಶಕ ರವಿ ಕಿರಣ್ ವಿಕಾಸ್, ಈಗ ಹೀರೋ ಆಗಿ ತೆರೆ ಮೇಲೆ ಬರಲು ಸಿದ್ದವಾಗಿದ್ದಾರೆ. "ಕಾಣದಂತೆ ಮಾಯವಾದನು" ಚಿತ್ರದ ಮೂಲಕ ನಿರ್ದೇಶಕ ರವಿ ಕಿರಣ್ ನಾಯಕನಾಗಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.
"ನಾನು ನಂದಿ, ಜಾಕಿ ಮತ್ತು ಕಡ್ಡಿಪುಡಿಯಂತಹ ಚಿತ್ರಗಳಲ್ಲಿ ಪಾತ್ರಗಳನ್ನು ಮಾಡಿದ್ದೇನೆ, ಆದರೆ ನಾಯಕ ನಟನಾಗಿ ಇದು ನನ್ನ ಮೊದಲ ಚಿತ್ರವಾಗಿದೆ." ಎಂದು ವಿಕಾಸ್ ಹೇಳುತ್ತಾರೆ, ಈ ಚಿತ್ರದಲ್ಲಿ ಸಿಂಧು ಲೋಕನಾಥ್ ರವಿ ಕಿರಣ್ ಗೆ ಜೋಡಿಯಾಗಲಿದ್ದಾರೆ.
ಇದೊಂದು ರೊಮ್ಯಾಂಟಿಕ್ ಡ್ರಾಮಾ ಎಂದಿರುವ ರವಿ ಕಿರಣ್ ಇದೊಂದು ಭೂತದ ಕಥೆಯೂ ಹೌದು ಎಉತ್ತಾರೆ. ಕಳೆದ ವಾರವಷ್ಟೇ ಕಾರ್ಯಕ್ರಮವೊಂದರಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.ಆಗಸ್ಟ್ ಅಥವಾ ಸೆಪ್ಟೆಂಬರ್ ನಲ್ಲಿ ಚಿತ್ರವನ್ನು ತೆರೆಗೆ ತರಲು ನಿರ್ಮಾಪಕರು ತಯಾರಾಗಿದ್ದಾರೆ.