'ಅಮೃತ್ ಅಪಾರ್ಟ್ ಮೆಂಟ್ಸ್'ನಲ್ಲಿ ಪ್ರತಿಭಾನ್ವಿತ ಗಾಯಕರು ಮತ್ತು ಸಂಯೋಜಕರ ತಂಡ: ಗುರುರಾಜ್ ಕುಲಕರ್ಣಿ

ಅಮೃತ್ ಅಪಾರ್ಟ್ ಮೆಂಟ್ ಸಿನಿಮಾದಲ್ಲಿ ಪ್ರತಿಭಾನ್ವಿತ ಗಾಯಕರು ಮತ್ತು ಸಂಗೀತ ಸಂಯೋಜಕರಿರುವುದಕ್ಕೆ ಚಿತ್ರ ತಂಡ ಸಖತ್ ಎಕ್ಸೈಟ್ ಆಗಿದೆ.  ಗುರುರಾಜ್ ಕುಲಕರ್ಣಿ ನಿರ್ದೇಶನದ ಈ ಸಿನಿಮಾದಲ್ಲಿ ಲಾಕ್ ಡೌನ್ ಮೊದಲು 2 ಹಾಡುಗಳ ಚಿತ್ರೀಕರಣ ಮುಗಿಸಲಾಗಿದೆ.
ಅಮೃತ್ ಅಪಾರ್ಟ್ ಮೆಂಟ್ ಸಿನಿಮಾ ಸ್ಟಿಲ್
ಅಮೃತ್ ಅಪಾರ್ಟ್ ಮೆಂಟ್ ಸಿನಿಮಾ ಸ್ಟಿಲ್
Updated on

ಅಮೃತ್ ಅಪಾರ್ಟ್ ಮೆಂಟ್ ಸಿನಿಮಾದಲ್ಲಿ ಪ್ರತಿಭಾನ್ವಿತ ಗಾಯಕರು ಮತ್ತು ಸಂಗೀತ ಸಂಯೋಜಕರಿರುವುದಕ್ಕೆ ಚಿತ್ರ ತಂಡ ಸಖತ್ ಎಕ್ಸೈಟ್ ಆಗಿದೆ.  ಗುರುರಾಜ್ ಕುಲಕರ್ಣಿ ನಿರ್ದೇಶನದ ಈ ಸಿನಿಮಾದಲ್ಲಿ ಲಾಕ್ ಡೌನ್ ಮೊದಲು 2 ಹಾಡುಗಳ ಚಿತ್ರೀಕರಣ ಮುಗಿಸಲಾಗಿದೆ.

ಎಸ್ ಡಿ ಅರವಿಂದ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ, ನಾವು ಬಂದೇವಾ ಬೆಂಗಳೂರು ನೋಡಕ ಹಾಡಿಗೆ ರಾಜ್ಯ ಪ್ರಶಸ್ತಿ ಪಡೆದ ಹಿನ್ನೆಲೆ ಗಾಯಕ ತೇಜಸ್ ಹರಿದಾಸ್ ಕೂಡ ಹಾಡಿದ್ದಾರೆ.

ಒಂದು ಹಾಡು ಜಾನಪದ ಶೈಲಿಯಲ್ಲಿದ್ದು, ಮತ್ತೊಂದು ಹಾಡುಶುರುವಾಗಬೇಕು ಮತ್ತೊಮ್ಮೆ ನಮ್ಮ ಒಲವ ಎಂಬ ಗೀತೆಯಾಗಿದೆ.

ಗಂಡ ಮತ್ತು ಹೆಂಡತಿ ತಮ್ಮ ಹಿಂದಿನ ನೆನಪುಗಳನ್ನು ಮೆಲುಕು ಹಾಕುವ ಗೀತೆ ಇದಾಗಿದೆ. ಕೆ. ಕಲ್ಯಾಣ್ ಸಾಹಿತ್ಯ ಬರೆದಿದ್ದು, ವಾಣಿ ಹರಿಕೃಷ್ಣ ಮತ್ತು ಅಜಯ್ ವಾರಿಯರ್ ಹಿನ್ನೆಲೆ ಗಾಯನವಿದೆ.

ಸಿನಿಮಾಗೆ ಗುರುರಾಜ್ ಕುಲಕರ್ಣಿ ಕಥೆ ಚಿತ್ರಕಥೆ ಬರೆದಿದ್ದು, ಬೆಂಗಳೂರಿನ ಅಪಾರ್ಟ್ ಮೆಂಟ್ ನಲ್ಲಿರುವ ದಂಪತಿ ಕಥೆ ಇದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com